ರಸ್ತೆ ದಾಟುತ್ತಿದ್ದ ಚಿರತೆಗೆ ಹಾಲು ವ್ಯಾಪಾರಿಯ ಬೈಕ್‌ ಡಿಕ್ಕಿ! ಮುಂದೇನಾಯ್ತು ವಿಡಿಯೋ ನೋಡಿ

Viral Video: ಸಿಸಿಟಿವಿಯಲ್ಲಿ ದೃಶ್ಯಾವಳಿಯಲ್ಲಿ ಚಿರತೆಯೊಂದು ಗೋಡೆಯಿಂದ ಹಾರಿ ರಸ್ತೆ ದಾಟಲು ಓಡಿದೆ. ಅದೇ ವೇಳೆ ಹಾಲಿ ವ್ಯಾಪಾರಿಯೊಬ್ಬ ವೇಗವಾಗಿ ಬಂದಿದ್ದಾನೆ. ಈ ವೇಳೆ ಚಿರತೆಗೆ ಬೈಕ್‌ ಡಿಕ್ಕಿಯಾಗಿದೆ.

Written by - Puttaraj K Alur | Last Updated : Feb 11, 2025, 06:23 PM IST
  • ಗೋಡೆ ಹಾರಿ ರಸ್ತೆ ದಾಟುತ್ತಿದ್ದ ಚಿರತೆಗೆ ಹಾಲಿನ ವ್ಯಾಪಾರಿಯ ಬೈಕ್‌ ಡಿಕ್ಕಿ
  • ಸಿಸಿಟಿವಿಯಲ್ಲಿ ಸೆರೆಯಾಗಿದ ಚಿರತೆಗೆ ಅಪಘಾತವಾಗಿರೋ ಭಯಾನಕ ದೃಶ್ಯ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ವಿಡಿಯೋ
ರಸ್ತೆ ದಾಟುತ್ತಿದ್ದ ಚಿರತೆಗೆ ಹಾಲು ವ್ಯಾಪಾರಿಯ ಬೈಕ್‌ ಡಿಕ್ಕಿ! ಮುಂದೇನಾಯ್ತು ವಿಡಿಯೋ ನೋಡಿ title=
ಚಿರತೆಗೆ ಬೈಕ್‌ ಡಿಕ್ಕಿ!

Leopard Viral Video: ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ಚಿರತಗೆ ಹಾಲು ವ್ಯಾಪಾರಿಯ ಬೈಕ್ ಡಿಕ್ಕಿ ಹೊಡೆದಿರುವಂತಹ ಘಟನೆ ನಡೆದಿದೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ರಾಜಸ್ಥಾನದ ಉದಯಪುರ ನಗರ ಸಮೀಪದ ವಸತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಚಿರತೆ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ಹಾಲು ವ್ಯಾಪಾರಿಯ ಬೈಕ್‌ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಿರತೆ ಮತ್ತು ಹಾಲು ಮಾರಾಟಗಾರ ಇಬ್ಬರೂ ನೆಲಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ ಹಾಲು ರಸ್ತೆಯಲ್ಲಿ ಚೆಲ್ಲಿದೆ. ಇದರ ಮೈ ಝಲ್‌ ಅನ್ನೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಯುವತಿಯ ಅಶ್ಲೀಲ ವಿಡಿಯೋ ತೋರಿಸಿ ಬೆದರಿಕೆ, ಬಿಜೆಪಿ ನಾಯಕನ ಬಂಧನ..! ಲ್ಯಾಪ್‌ಟಾಪ್‌ನಲ್ಲಿ 10 ಕ್ಕೂ ಹೆಚ್ಚು ಮಹಿಳೆಯ ಅಶ್ಲೀಲ ವಿಡಿಯೋ ಪತ್ತೆ

ಭಾನುವಾರ (ಫೆ.9) ರಾತ್ರಿ 8 ಗಂಟೆ ಸುಮಾರಿಗೆ ಉದಯಪುರ ನಗರದ ಬಳಿಯ ಶಿಲ್ಪಗ್ರಾಮ್‌ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ದೃಶ್ಯಾವಳಿಯಲ್ಲಿ ಚಿರತೆಯೊಂದು ಗೋಡೆಯಿಂದ ಹಾರಿ ರಸ್ತೆ ದಾಟಲು ಓಡಿದೆ. ಅದೇ ವೇಳೆ ಹಾಲಿ ವ್ಯಾಪಾರಿಯೊಬ್ಬ ವೇಗವಾಗಿ ಬಂದಿದ್ದಾನೆ. ಈ ವೇಳೆ ಚಿರತೆಗೆ ಬೈಕ್‌ ಡಿಕ್ಕಿಯಾಗಿದೆ. ಪರಿಣಾಮ ಚಿರತೆ ರಸ್ತೆಯಲ್ಲಿ ನೆಲಕ್ಕೆ ಬಿದ್ದು ಎದ್ದು ಹೋಗಿದೆ. ಕೊಂಚ ದೂರದಲ್ಲೇ ಹಾಲಿನ ವ್ಯಾಪಾರಿಯು ಸಹ ರಸ್ತೆಯಲ್ಲಿ ಬಿದ್ದಿದ್ದಾನೆ. ಆತನ ಹಾಲು ರಸ್ತೆಯಲ್ಲಿ ಚೆಲ್ಲೆ ಹರಿದು ಹೋಗಿದೆ. 

ರಸ್ತೆಯಲ್ಲಿ ಬಿದ್ದ ಹಾಲಿನ ವ್ಯಾಪಾರಿಗೆ ಕ್ಷಣಕಾಲ ಏನೂ ಮಾಡಬೇಕೆಂದು ತಿಳಿದಿಲ್ಲ. ಆತ ಚಿರತೆಯನ್ನೇ ನೋಡುತ್ತಾ ರಸ್ತೆಯಲ್ಲಿ ಕುಳಿತ್ತಿದ್ದ. ಈ ವೇಳೆ ಸ್ಥಳೀಯರು ಬಂದು ಆತನನ್ನು ಎಬ್ಬಿಸಿ ಸಹಾಯ ಮಾಡಿದ್ದಾರೆ. ಉದಯಪುರದಲ್ಲಿ ಚಿರತೆಯ ಓಡಾಟ ಇದೇ ಮೊದಲೇನಲ್ಲ. ಕಳೆದ ತಿಂಗಳು ಇಲ್ಲಿ ಚಿರತೆ ದಾಳಿಗೆ 10 ಮಂದಿ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಅಲ್ವಾರ್, ದೌಸಾ, ಜೈಪುರ ಮತ್ತು ಸಿಕರ್‌ನಲ್ಲಿ ಚಿರತೆಗಳ ಓಡಾಟ ವರದಿಯಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಓಡಾಡುತ್ತಿರುವ ಚಿರತೆಗಳು ಜನರ ಮೇಲೆ ದಾಳಿ ಮಾಡುತ್ತಿವೆ. ಈ ಬಗೆ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಇದನ್ನೂ ಓದಿ: ಮದ್ಯ ಪ್ರಿಯರೇ ಗಮನಿಸಿ.. ಇಂದಿನಿಂದಲೇ ಬಿಯರ್‌ ಬೆಲೆ ಹೆಚ್ಚಳ..! ಸ್ಟ್ರಾಂಗ್‌.. ಲೈಕ್‌ ದರ ಎಷ್ಟಿದೆ ಗೊತ್ತೆ..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News