Diabetes and blood sugar levels Ayurvedic treatment: ಹೆಚ್ಚು ಸಿಹಿ ತಿನ್ನುವುದನ್ನು ತಪ್ಪಿಸಬೇಕು, ಇಲ್ಲದಿದ್ದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಬಹುದು. ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರುವುದು ಮುಖ್ಯ. ಏಕೆಂದರೆ ಜನರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ದೇಶದಲ್ಲಿ ಮಧುಮೇಹವು ವೇಗವಾಗಿ ಹರಡುತ್ತಿದೆ. ದೇಶದಲ್ಲಿ ಸಕ್ಕರೆ ರೋಗಿಗಳ ಕೊರತೆಯಿಲ್ಲ. ಭಾರತವನ್ನು ಮಧುಮೇಹಿಗಳ ರಾಜಧಾನಿ ಎಂದು ಕರೆಯಲಾಗುತ್ತದೆ. ಭಾರತ 2030ಕ್ಕೆ ಹೃದ್ರೋಗಿ ಹಾಗೂ ಮಧುಮೇಹಿಗಳ ರಾಜಧಾನಿಯಾಗಿರಲಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿದ್ದ ಸಿ.ಎನ್.ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ದೇಶದ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ.
ಭಾರತದಲ್ಲಿ ಮಧುಮೇಹ ರೋಗಿಗಳು
* 11 ಕೋಟಿಗೂ ಹೆಚ್ಚು ರೋಗಿಗಳು
* ಕಳೆದ 30 ವರ್ಷಗಳಲ್ಲಿ 150%ರಷ್ಟು ಹೆಚ್ಚಾಗಿದೆ
* ಮುಂದಿನ 15 ವರ್ಷಗಳಲ್ಲಿ ಸುಮಾರು ಇದು 14 ಕೋಟಿಗಳಾಗಲಿದೆ
ವಿಶ್ವದಲ್ಲಿ ಮಧುಮೇಹ ರೋಗಿಗಳು
* ಸುಮಾರು 50 ಕೋಟಿ
* 24 ಕೋಟಿ ಜನರಿಗೆ ಈ ರೋಗದ ಬಗ್ಗೆ ತಿಳಿದಿಲ್ಲ
* 90% ಜನರಿಗೆ ಟೈಪ್ -2 ಮಧುಮೇಹವಿದೆ
ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯೋದ್ರಿಂದ ಆಗುವ ಪ್ರಯೋಜನಳೇನು ಗೊತ್ತೇ?
ಮಧುಮೇಹದ ಲಕ್ಷಣಗಳು
* ಅತಿಯಾದ ಬಾಯಾರಿಕೆ
* ಆಗಾಗ್ಗೆ ಮೂತ್ರ ವಿಸರ್ಜನೆ
* ಅತಿಯಾದ ಹಸಿವು
* ತೂಕ ನಷ್ಟ
* ಕಿರಿಕಿರಿ
* ದೃಷ್ಟಿ ಮಂದವಾಗುವುದು
ಅಧಿಕ ಸಕ್ಕರೆ ಮಾರಕ, ಅದು ದೇಹಕ್ಕೆ ಅಪಾಯಕಾರಿ
* ಮೆದುಳು
* ಕಣ್ಣು
* ಹೃದಯ
* ಯಕೃತ್ತು
* ಮೂತ್ರಪಿಂಡ
* ಕೀಲುಗಳಿಗೆ ಅಧಿಕ ಸಕ್ಕರೆ ಮಾರಕ
ಸಕ್ಕರೆ ಮಟ್ಟಗಳು
ಸಾಮಾನ್ಯ
* ತಿನ್ನುವ ಮೊದಲು - 100ಕ್ಕಿಂತ ಕಡಿಮೆ
* ತಿಂದ ನಂತರ - 140ಕ್ಕಿಂತ ಕಡಿಮೆ
ಮಧುಮೇಹ ಪೂರ್ವ
* ಊಟದ ಮೊದಲು - 100-125 ಮಿಗ್ರಾಂ/ಡೆಸಿಲೀಟರ್
* ಊಟದ ನಂತರ - 140-199 ಮಿಗ್ರಾಂ/ಡೆಸಿಲೀಟರ್
ಮಧುಮೇಹ
* ಊಟದ ಮೊದಲು - 125 ಮಿಗ್ರಾಂ/ಡೆಸಿಲೀಟರ್ಗಿಂತ ಹೆಚ್ಚು
* ಊಟದ ನಂತರ - 200 ಮಿಗ್ರಾಂ/ಡೆಸಿಲೀಟರ್ಗಿಂತ ಹೆಚ್ಚು
ನೀವು ಎಷ್ಟು ಸಕ್ಕರೆ ತಿನ್ನಬೇಕು?
* WHO ಮಾರ್ಗಸೂಚಿಯ ಪ್ರಕಾರ
* ದಿನಕ್ಕೆ 5 ಗ್ರಾಂ ಗಿಂತ ಹೆಚ್ಚು ಸಕ್ಕರೆ ಸೇವಿಸಬಾರದು.
* ಕೇವಲ 5 ಗ್ರಾಂ ಅಂದರೆ 1 ಚಮಚ ಸಕ್ಕರೆ ಮಾತ್ರ ಸೇವಿಸಬೇಕು.
* ಆದರೆ ಜನರು 3 ಪಟ್ಟು ಹೆಚ್ಚು ಸಕ್ಕರೆ ಸೇವಿಸುತ್ತಾರೆ.
ಸಕ್ಕರೆ ಮಟ್ಟ ನಿಯಂತ್ರಣ ಹೇಗೆ?
* ಸೌತೆಕಾಯಿ-ಕಹಿ ಸೋರೆಕಾಯಿ-ಟೊಮೆಟೋ ರಸ ತೆಗೆದುಕೊಳ್ಳಿ,
* ಗಿಲೋಯ್ ಕಷಾಯ ಕುಡಿಯಿರಿ
* ಮಂಡೂಕಾಸನ-ಯೋಗಮುದ್ರಾಸನ ಪ್ರಯೋಜನಕಾರಿ
* 15 ನಿಮಿಷಗಳ ಕಾಲ ಕಪಾಲಭಾತಿ ಮಾಡಿ.
ಇದನ್ನೂ ಓದಿ: ಇದೇ ಕಾರಣಕ್ಕೆ ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾಗುತ್ತೆ; ಜೀವಕ್ಕೆ ಅಪಾಯ ತರುವ ಇದ್ರಿಂದ ಪಾರಾಗುವುದು ಹೇಗೆ?
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.