ರಮೇಶ್ ಬಿಧುರಿ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಅತಿಶಿ! ಎಎಪಿ 'ಗೌರವ' ಉಳಿಸಿದ ದೆಹಲಿ ಮುಖ್ಯಮಂತ್ರಿ..

Delhi Assembly Elections 2025: ಮುಖ್ಯಮಂತ್ರಿ ಅತಿಶಿ ದೆಹಲಿಯ ಕಲ್ಕಾಜಿ ಸ್ಥಾನದಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರು ರಮೇಶ್ ಬಿಧುರಿ ಅವರನ್ನು ಸುಮಾರು ಮೂರು ಸಾವಿರ ಮತಗಳಿಂದ ಸೋಲಿಸಿದ್ದಾರೆ..  

Written by - Savita M B | Last Updated : Feb 8, 2025, 01:31 PM IST
  • ದೆಹಲಿ ಮುಖ್ಯಮಂತ್ರಿ ಅತಿಶಿ ಕಲ್ಕಾಜಿಯಿಂದ ಚುನಾವಣೆಯಲ್ಲಿ ಜಯಗಳಿಸಿದ್ದಾರೆ.
  • ಬಿಜೆಪಿಯ ರಮೇಶ್ ಬಿಧುರಿ ಅವರನ್ನು ಸೋಲಿಸಿದ್ದಾರೆ.
ರಮೇಶ್ ಬಿಧುರಿ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಅತಿಶಿ! ಎಎಪಿ 'ಗೌರವ' ಉಳಿಸಿದ ದೆಹಲಿ ಮುಖ್ಯಮಂತ್ರಿ..   title=

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅತಿಶಿ ಕಲ್ಕಾಜಿಯಿಂದ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಅವರು ಚುನಾವಣೆಯಲ್ಲಿ ಬಿಜೆಪಿಯ ರಮೇಶ್ ಬಿಧುರಿ ಅವರನ್ನು ಸೋಲಿಸಿದ್ದಾರೆ. ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಕೂಡ ಚುನಾವಣೆಯಲ್ಲಿ ಸೋತಿದ್ದಾರೆ. ಮಾಹಿತಿಯ ಪ್ರಕಾರ, ಸಿಎಂ ಅತಿಶಿ ಸುಮಾರು ಮೂರು ಸಾವಿರ ಮತಗಳಿಂದ ಚುನಾವಣೆಯಲ್ಲಿ ಗೆದ್ದಿದ್ದಾರೆ. ಆರಂಭಿಕವಾಗಿ ಹಿನ್ನಡೆಯಲ್ಲಿದ್ದ ಅತಿಶಿ ಕೊನೆಗೆ ರಮೇಶ್ ಬಿಧುರಿಗಿಂತ ಮುಂದಾಗಿ ಗೆಲುವು ಸಾಧಿಸಿದ್ದಾರೆ.. 

ಆಪ್‌ನ 'ಗೌರವ' ಉಳಿಸಿದ ಅತಿಶಿ: 
ಚುನಾವಣಾ ಆಯೋಗ ನೀಡಿದ ಮಾಹಿತಿಯ ಪ್ರಕಾರ, ರಮೇಶ್ ಬಿಧುರಿ ಅವರು ಸಿಎಂ ಅತಿಶಿ ಅವರಿಗೆ ಕಠಿಣ ಪೈಪೋಟಿ ನೀಡಿದರು. ಏಕೆಂದರೇ ಆರಂಭದಲ್ಲಿ  ರಮೇಶ್ ಅವರೇ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಭಾವಿಸಲಾಗಿತ್ತು ಆದರೆ ಕೊನೆಯ ಮೂರು ಸುತ್ತುಗಳ ಎಣಿಕೆಯ ಸಮಯದಲ್ಲಿ, ಅತಿಶಿ ಮುನ್ನಡೆ ಸಾಧಿಸಲು ಪ್ರಾರಂಭಿಸಿದರು.. ರೋಮಾಂಚಕ ಸ್ಪರ್ಧೆಯಲ್ಲಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಆಮ್ ಆದ್ಮಿ ಪಕ್ಷದ ಗೌರವವನ್ನು ಉಳಿಸಿದರು. ವಾಸ್ತವವಾಗಿ, ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿ ಪಕ್ಷದ ಅನೇಕ ಹಿರಿಯ ನಾಯಕರು ಚುನಾವಣೆಯಲ್ಲಿ ಸೋತಿದ್ದಾರೆ. 

ಇದನ್ನೂ ಓದಿ-Delhi Election Result 2025 Live:ಬಿಜೆಪಿ ಅತಿದೊಡ್ಡ ಮುನ್ನಡೆ, ಮತ ಎಣಿಕೆ ಆರಂಭದಿಂದಲೂ ಅರವಿಂದ್ ಕೇಜ್ರಿವಾಲ್ ಹಿನ್ನಡೆ

ಕಾಂಗ್ರೆಸ್ ನಿರೀಕ್ಷೆಗೆ ಹಿನ್ನಡೆ: 
2020 ರ ಚುನಾವಣೆಯಲ್ಲೂ ಆಮ್ ಆದ್ಮಿ ಪಕ್ಷವು ಕಲ್ಕಾಜಿ ಸ್ಥಾನದಿಂದ ಸ್ಪರ್ಧಿಸಿತ್ತು.. ಈ ಬಾರಿ ಬಿಜೆಪಿ ರಮೇಶ್ ಬಿಧುರಿ ಅವರನ್ನು ಮತ್ತು ಕಾಂಗ್ರೆಸ್ ಅಲ್ಕಾ ಲಂಬಾ ಅವರನ್ನು ಕಣಕ್ಕಿಳಿಸುವ ಮೂಲಕ ಸ್ಪರ್ಧೆಯನ್ನು ಕಠಿಣಗೊಳಿಸಿತ್ತು, ಆದರೆ ಕಾಂಗ್ರೆಸ್ ಇಲ್ಲಿ ಹೆಚ್ಚಿನ ಮತಗಳನ್ನು ಪಡೆಯಲಿಲ್ಲ. ಕಾಂಗ್ರೆಸ್‌ಗೆ ಇಲ್ಲಿ ಐದು ಸಾವಿರ ಮತಗಳೂ ಸಿಗಲಿಲ್ಲ. 

 ಜಂಗ್‌ಪುರ ವಿಧಾನಸಭಾ ಕ್ಷೇತ್ರದ ಎಎಪಿ ನಾಯಕ ಮತ್ತು ಅಭ್ಯರ್ಥಿ ಮನೀಶ್ ಸಿಸೋಡಿಯಾ ತಮ್ಮ ಸೋಲಿನ ನಂತರ, ಜಂಗ್‌ಪುರದ ಜನರು ಬಹಳಷ್ಟು ಪ್ರೀತಿಯನ್ನು ನೀಡಿದರು ಆದರೆ ನಾವು ಸುಮಾರು 600 ಮತಗಳಿಂದ ಹಿಂದುಳಿದಿದ್ದೇವೆ. ಗೆದ್ದ ಅಭ್ಯರ್ಥಿಗಳನ್ನು ನಾವು ಅಭಿನಂದಿಸುತ್ತೇವೆ. ಅವರು ಜಂಗ್‌ಪುರದ ಜನರ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.. 

ಇದನ್ನೂ ಓದಿ-Delhi Election Result 2025 Live:ಬಿಜೆಪಿ ಅತಿದೊಡ್ಡ ಮುನ್ನಡೆ, ಮತ ಎಣಿಕೆ ಆರಂಭದಿಂದಲೂ ಅರವಿಂದ್ ಕೇಜ್ರಿವಾಲ್ ಹಿನ್ನಡೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News