Karnataka Rain Update: ಸೆಪ್ಟೆಂಬರ್ ತಿಂಗಳ ಮೊದಲ ಮೂರು ಬಿಡುವು ನೀಡಿದ್ದ ವರುಣ ಮತ್ತೆ ಅಬ್ಬರ ಶುರು ಮಾಡಿದ್ದಾನೆ. ಕರಾವಳಿ ಹಾಗೂ ಉತ್ತರ ಕರ್ನಾಟಕದ ವಿಜಯಪುರ, ರಾಯಚೂರು, ಬಾಗಲಕೋಟೆ, ಕಲಬುರಗಿಯಲ್ಲಿ ಮುಂದಿನ 2-3 ದಿನಗಳ ಕಾಲ ಭಾರೀ ಮಳೆ ಸುರಿಯುವ ಭೀತಿ ಇದೆ. ಇನ್ನೊಂದೆಡೆ ವರುಣಾರ್ಭಟ ಮುಂದುವರಿದರೆ ಇಲ್ಲಿನ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ. ಬಂಟ್ವಾಳ, ಪುತ್ತೂರು, ಕಡಬದ ಕೆಲವೆಡೆ ಮಳೆ. ಉಳ್ಳಾಲ ಟಿ.ಸಿ.ರೋಡ್ ಮುಳಿಗುಡ್ಡೆಯಲ್ಲಿ ಮಳೆ ಅವಾಂತರ. ಕುಸಿದು ಬಿದ್ದ ಮನೆ ಆವರಣದ ಗೋಡೆ ಮಣ್ಣು . ಮಣ್ಣು ಕುಸಿತದಿಂದ ಕುಸಿಯುವ ಭೀತಿಯಲ್ಲಿ ಮನೆ . JCB ಮೂಲಕ ಮಣ್ಣು ತೆರವು ಕಾರ್ಯಾಚರಣೆ.
School Closed News : ಯಾಗಿ ಚಂಡಮಾರುತದಿಂದಾಗಿ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯ ಎಚ್ಚರಿಕೆಯನ್ನೂ ನೀಡಲಾಗಿದೆ.ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಲೆಗಳನ್ನು ಮುಚ್ಚುವಂತೆ ಆದೇಶ ನೀಡಲಾಗಿದೆ.
Rain Alert: ಇಲಾಖೆಯ ಅಂದಾಜಿನ ಪ್ರಕಾರ ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ ಕೋಲಾರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಆಸ್ನಾ ಎಪೆಕ್ಟ್ನಿಂದ ಬೀದರ್ನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ನಿರಂತರ ಸುರಿದ ಮಳೆಯಿಂದಾಗಿ 38 ಮನೆಗಳಿಗೆ ಹಾನಿಯಾಗಿದೆ. ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನಲ್ಲಿ 14 ಮನೆ, ಚಿಟಗುಪ್ಪಾದಲ್ಲಿ 7 ಮನೆ, ಔರಾದ್ನಲ್ಲಿ 6 ಮನೆ, ಬಸವಕಲ್ಯಾಣ ಹಾಗೂ ಭಾಲ್ಕಿ ತಾಲೂಕಿನಲ್ಲಿ ತಲಾ 4 ಮನೆ ಸೇರಿ ಜಿಲ್ಲೆಯಲ್ಲಿ ಸುಮಾರು 38 ಮನೆಗಳಿಗೆ ಹಾನಿಯಾಗಿದೆ.
ಆಂಧ್ರದಲ್ಲಿ ಮಳೆಯಿಂದ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.. ಆಂಧ್ರದಲ್ಲಿ 294 ಗ್ರಾಮಗಳಲ್ಲಿ 13,277 ಜನರ ಸ್ಥಳಾಂತರ ಮಾಡಲಾಗಿದೆ.. ಇನ್ನೂ ತೆಲಂಗಾಣದಲ್ಲಿ 99 ರೈಲು ಸಂಚಾರ ರದ್ದು ಬಂದ ಮಾಡಲಾಗಿದೆ.. ಇನ್ನೂ ಹೈದರಾಬಾದ್ನಲ್ಲಿ ಭಾರೀ ಮಳೆಯ ಕಾರಣ ಆಂಧ್ರ ಪ್ರದೇಶದ ಐದು ಜಿಲ್ಲೆಗಳ 294 ಗ್ರಾಮಗಳಿಂದ 13,227 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಆಂಧ್ರ ಪ್ರದೇಶದ ಗೃಹ ಸಚಿವರಾದ ವಂಗಲಪುಡಿ ಅನಿತಾ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಮುಂದುವರೆದ ಮಳೆ ಆರ್ಭಟ
ಕಳೆದ 4 ದಿನದಿಂದ ಬಿಟ್ಟು ಬಿಡದೇ ಸುರಿಯುತ್ತಿದೆ ಮಳೆ
ವೆಂಕಟಾಪುರ, ಗಾದಿಗನೂರು, ಕಮಲಾಪುರದಲ್ಲಿ ಭಾರೀ ಮಳೆ
ಭಾರೀ ಮಳೆಯಿಂದ ಹೊಲ-ಗದ್ದೆಗೆ ನುಗ್ಗಿದ ನೀರು, ಬೆಳೆ ನಾಶ
ಬಾಳೆ, ಹತ್ತಿ, ಮೆಣಶಿನ ಕಾಯಿ, ಬೆಳೆಗಳು ನೀರು ಪಾಲು
ತುಮಕೂರು ಜಿಲ್ಲೆಯಲ್ಲಿ ರಾತ್ರಿಯಿಡಿ ಅಬ್ಬರಿಸಿದ ವರುಣ
2 ಗಂಟೆಗಳ ನಿರಂತರ ಮಳೆಗೆ ರಸ್ತೆಗಳು ಸಂಪೂರ್ಣ ಜಲಾವೃತ
ಕೊರಟಗೆರೆ ತಾಲೂಕು ಕೇಂದ್ರ ರಸ್ತೆಯಲ್ಲಿ ಉಕ್ಕಿ ಹರಿದ ನೀರು
ರಸ್ತೆಯ ಅಕ್ಕಪಕ್ಕದ ಅಂಗಡಿ ಮುಗ್ಗಟ್ಟುಗಳಿಗೆ ನುಗ್ಗಿ ಅವಾಂತರ
ತುಂಬಿ ಹರಿಯುವ ರಸ್ತೆಯಲ್ಲೇ ವಾಹನ ಸವಾರರು ಸಂಚಾರ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವರುಣನ ಅಬ್ಬರ..!
ವರುಣನ ಅಬ್ಬರಕ್ಕೆ ತೋಟ, ಮನೆ ಜಲಾವೃತ
ಮನೆಗಳಿಗೆ ನೀರು ನುಗ್ಗಿ ಅವಾಂತರ, ಜನ ತತ್ತರ
ರಸ್ತೆಗಳ ಉದ್ದಕ್ಕೂ ಉಕ್ಕಿ ಹರಿಯುತ್ತಿರುವ ನೀರು
ಗುಡುಗು ಮಿಂಚಿನ ಜೊತೆ ಅಬ್ಬರಿಸಿದ ಮಳೆರಾಯ
ಬಾಗಲಕೋಟೆಯ ಬನಹಟ್ಟಿ ನಗರದಲ್ಲಿ ಮಳೆ
ಬಡಾವಣೆಯಲ್ಲಿ ನದಿಯಂತೆ ಹರಿದ ಮಳೆ ನೀರು
ಸುಮಾರು ಒಂದು ಗಂಟೆಗಳ ಕಾಲ ಸುರಿದ ವರುಣ
ಬನಹಟ್ಟಿ ನಗರದಾದ್ಯಂತ ಮಳೆರಾಯನ ಅಬ್ಬರ
ಬನಹಟ್ಟಿಯ ಬರಮಪ್ಪನ ಗಡಿ ಹತ್ತಿರ ರಸ್ತೆ ತುಂಬಿ ಹರಿದ ಮಳೆ ನೀರು
ಕೆಲವು ಮನೆಗಳಿಗೂ ಮಳೆ ನುಗ್ಗಿದ ಮಾಹಿತಿ
ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರ
ರಾಜ್ಯದಲ್ಲಿ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿ
ಮಳೆ ಹಾನಿ ಕುರಿತು ಸಿಎಂ ಸಿದ್ದರಾಮಯ್ಯ ಸಭೆ
ಇಂದು ಮಧ್ಯಾಹ್ನ 12ಕ್ಕೆ ಅಧಿಕಾರಿಗಳೊಂದಿಗೆ ಸಭೆ
ಮಳೆಹಾನಿ ಕುರಿತು ಮಾಹಿತಿ ಪಡೆಯಲಿರುವ ಸಿಎಂ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸುಂಕಸಾಲೆ ಸಮೀಪದ ಬಿಳಗಲಿ ಗ್ರಾಮದ 20-25 ಮನೆಗಳ ಗ್ರಾಮ 2019ರ ರಣಮಳೆಗೆ ಅಕ್ಷರಶಃ ಬೆಚ್ಚಿ ಬಿದ್ದಿತ್ತು. ಧರೆ ಕುಸಿದು 3 ಮನೆಗಳು ಕೊಚ್ಚಿ ಹೋಗಿದ್ವು. ಅಂದಿನಿಂದ ಅಲ್ಲಿರೋ 17 ಮನೆಗಳಿಗೆ ಇಂದಿಗೂ ಅದೇ ಭಯ...ಆತಂಕ ಕಾಡ್ತಿತ್ತು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.