ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರಕ್ಕೆ ಭೇಟಿ ನೀಡಿದ ಯತೀಂದ್ರ ಸಿದ್ದರಾಮಯ್ಯ. ಕೋಲಾರಮ್ಮ ದೇವಾಲಯದಲ್ಲಿ ಯತೀಂದ್ರ ಪೂಜೆ ಸಲ್ಲಿಕೆ. ಕೋಲಾರದಲ್ಲಿ ಸಿದ್ದರಾಮಯ್ಯಗೆ ಬಾಡಿಗೆ ಮನೆ ಹುಡುಕಾಟ.
ಕೋಲಾರ ಕುರುಕ್ಷೇತ್ರಕ್ಕೆ ಕಾಂಗ್ರೆಸ್ ಯಾತ್ರೆ ಪ್ರಜಾಧ್ವನಿ ಎಂಟ್ರಿ. ಕೋಲಾರದಲ್ಲಿ ʻಹುಲಿಯಾ ಹವಾʼ.. ʻಟಗರುʼ ಪವರ್ ಶೋ. ಸಿದ್ದರಾಮಯ್ಯ ಅವರ 100ಅಡಿ ಎತ್ತರದ ಕಟೌಟ್ ನಿರ್ಮಾಣ. ಕೋಲಾರ ನಗರ ಹೊರವಲಯದ ಟಮಕ ಬಳಿ ಸಮಾವೇಶ.
ಸಿದ್ದರಾಮಯ್ಯ ನನ್ನ ಸ್ನೇಹಿತ, ಗೆಲ್ಲುವ ಲಕ್ಷಣಗಳು ಕಾಣ್ತಿಲ್ಲ. ಅವರಿಗೆ ಮೋಸ ಮಾಡಲು ಅಲ್ಲಿ ಕರೆದುಕೊಂಡು ಹೋಗವ್ರೆ. ಕೋಲಾರದ ಮುಸ್ಲಿಂರು ಜಾತಿ ನೋಡಿ ವೋಟ್ ಹಾಕಲ್ಲ. ಅವರು ತತ್ವ ಸಿದ್ಧಾಂತ ನೋಡಿ ನಾಯಕನಿಗೆ ವೋಟ್ ಹಾಕ್ತಾರೆ ಎಂದು ಬೆಂಗಳೂರಿನಲ್ಲಿ JDS ರಾಜ್ಯಾಧ್ಯಕ್ಷ ಇಬ್ರಾಹಿಂ ಹೇಳಿದ್ರು.
ಹಾಲೆಂಡ್ ನಲ್ಲಿ ಉದ್ಯಮಿ ಹಾಗೂ ಇಂಜನಿಯರ್ ಆಗಿರುವ ಅಶೋಕ್ ಹಟ್ಟಿ ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಕೋರಿದ್ದಾನೆ.ಈ ಕುರಿತಾಗಿ ಮಾತನಾಡಿರುವ ಅವರು ಕಳೆದ ಬಾರಿ ಹಾಲೆಂಡಿನಿಂದ ಬಂದು ನಿಮಗೆ ಮತ ಹಾಕಿದ್ದೆವು.ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸಬೇಕು. ಸಿದ್ದರಾಮಯ್ಯನವರು ಇಮ್ಮಡಿ ಪುಲಿಕೇಶೀ ಇದ್ದ ಹಾಗೆ, ಬಾದಾಮಿಗೆ ಸಾವಿರಾರು ಕೋಟಿ ರೂ ಅನುದಾನ ತಂದಿದ್ದಾರೆ.
ಮುನಿಯಪ್ಪ, ರಮೇಶ್ ಕುಮಾರ್ ಎದುರೇ ಸ್ಪಷ್ಟನೆ. ಬಾದಾಮಿಗೆ ಬೈ.. ಕೋಲಾರಕ್ಕೆ ಜೈ ಎಂದ ‘ಟಗರು’..ಕ್ಷೇತ್ರ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ಸಿದ್ದರಾಮಯ್ಯ.. ಬಿಜೆಪಿಯ ವರ್ತೂರು ಪ್ರಕಾಶ್ ವಿರುದ್ಧ ಸ್ಪರ್ಧೆ ಖಚಿತ
ಸಿದ್ದು ಅಹಿಂದ ಅಂತ ಎಲ್ಲರನ್ನೂ ಮುಗಿಸುತ್ತಿದ್ದಾರೆ. ಕೋಲಾರ ಕ್ಷೇತ್ರ ಫೈನಲ್ ಮಾಡುತ್ತಿದ್ದಂತೆ ನಾನು ಮೂರ್ಛೆ ಹೋದೆ ಎಂದು ಸಿದ್ದು ಕೋಲಾರ ಸ್ಪರ್ಧೆ ಕುರಿತು ವರ್ತೂರು ಪ್ರಕಾಶ್ ವ್ಯಂಗ್ಯವಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.