Zee Achievers award 2025: 3ನೇ ವರ್ಷದ ವಾರ್ಷಿಕೋತ್ಸವಾದ ಸಂಭ್ರಮ: ಸಾಧಕರನ್ನು ಗುರುತಿಸಿ ಗೌರವಿಸಿದ ಜೀ ಕನ್ನಡ ನ್ಯೂಸ್‌

Zee Achievers award 2025: 3ನೇ ವಾರ್ಷಿಕೋತ್ಸವದ ಅಂಗವಾಗಿ ಜೀ ಕನ್ನಡ ನ್ಯೂಸ್‌ ವತಿಯಿಂದ, Zee Achievers Awards ಕಾರ್ಯಕ್ರಮವನ್ನು ದಿ ರಿಟ್ಸ್‌ ಕಾರ್ಲ್‌ಟರ್ನ್‌ನಲ್ಲಿ ಆಯೋಜಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯಾತಿಗಣ್ಯರನ್ನು ಗುರುತಿಸಿ ಜೀ ಕನ್ನಡ ನ್ಯೂಸ್‌ ವತಿಯಿಂದ ಗೌರವಿಸಲಾಯಿತು. 
 

1 /17

Zee Achievers award 2025: Zee Achievers award ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಿ.ಕೆ.ಶಿವಕುಮಾರ್‌, ಶ್ರೀ ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮೀಜಿ, ಡಿ. ವಿ. ಸದಾನಂದಗೌಡ, ರಾಮಲಿಂಗಾರೆಡ್ಡಿ, ಶಿವರಾಜ್‌ ತಂಗಡಗಿ ಹಾಗೂ ಸತೀಶ್‌ ಜಾರಕಿಹೊಳಿ ಅವರು ಆಗಮಿಸಿದ್ದರು.  

2 /17

ಈ ಸಂದರ್ಭದಲ್ಲಿ ಸಮಾಜ ಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಆಲಗಾನಿ ಕಿರಣ್‌ ಕುಮಾರ್‌, ಶಿಕ್ಷಣತಜ್ಞ ಅನಿಲ್‌ಕುಮಾರ್‌ ಜಿ. ಆರ್‌, ಬಿಬಿಎಂಪಿ ಒಕ್ಕೂಟದ ಅಧ್ಯಕ್ಷರಾಗಿರುವ ಅಮೃತ್‌ ರಾಜ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

3 /17

ಇನ್ನೂ ಶಿಕ್ಷಣತಜ್ಞ ಡಾ. ಎ.ಎಸ್‌. ಬಾಲಸುಬ್ರಮಣ್ಯ,ಮುಖ್ಯ ಇಂಜಿನಿಯರ್ ಆಗಿ SWM-BSWL, BBMP ಯಲ್ಲಿ ಕಾರ್ಯ ನಿರ್ವಿಹಿಸುತ್ತಿರುವ ಬಸವರಾಜ್‌ ಆರ್‌. ಕಬಡೆ ಹಾಗೂ ಸಮಾಜೆ ಸೇವೆಗಾಗಿ ತಮ್ಮನ್ನು ತಾವು ಮುಡಿಪಾಗಿಸಿಕೊಂಡಿರುವ ಸಿ.ಎಂ. ಶಾಬಾಸ್‌ ಖಾನ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

4 /17

ಸಮಾಜ ಸೇವಕರಾಗಿ ಕೆಲಸ ಮಾಡುತ್ತಿರುವ ಅರುಣ್‌ ಕುಮಾರ್‌ ಎಸ್‌ ಪಾಟೀಲ್‌, ಅರುಣ್‌ ಶರ್ಮಾ ಹಾಗೂ, ಸಾಮಾಜ ಸೇವಕಿ ಮತ್ತು ಉದ್ಯಮಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಡಾ. ಜಿ.ಎಸ್‌ ಲತಾ ಜೈ ಪ್ರಕಾಶ್‌ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು.  

5 /17

ಆರೋಗ್ಯ ಸೇವೆಯಲ್ಲಿ ನಿರತಾಗಿರುವ ಡಾ. ಫರೂಕ್‌ ಅಹ್ಮದ್‌ ಮಾನೂರ್‌, ಬಿಜೆಪಿ ನಾಯಕ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ.ಕೆ. ಮುನಿಯಪ್ಪಾ ಹಾಗೂ ಜ್ಯೋತಿಷಿಗಳಾದ ಡಾ. ಎನ್‌ ಕೀರ್ತಿರಾಜ್‌ ಅವರನ್ನು ಸಹ ಈ ಸಂದರ್ಭದಲ್ಲಿ ಗೌರವಿಸಲಾಯಿತು.  

6 /17

ಆರೋಗ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಶರದ್‌ ಕುಲಕರ್ಣಿ, ಸಮಾಜ ಸೇವೆಯಲ್ಲಿ ನಿರತರಾಗಿರುವ ಡಾ. ಜಿ.ಎಸ್‌. ಶ್ರೀಧರ್‌ ಹಾಗೂ ಆರೋಗ್ಯ ಸೇವೆ ಮಾಡುತ್ತಿರುವ ಡಾ. ಆಶಿಕ್‌ ಬಿ.ಜಿ ಅವರಿಗೆ ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

7 /17

ಇನ್ನೂ,  ಶಿಕ್ಷಣತಜ್ಞ ಡಾ. ಜಿ.ಎಸ್‌. ರವಿ, ಆರೋಗ್ಯ ಸೇವಕರಾಗಿರುವ ಡಾ. ಧ್ಯಾನೇಶ್ವರ್‌ ಹಾಗೂ ಡಾ. ಶ್ರೀಮಂತ್‌ ಕುಂಬಾರ್‌ ಅವರಿಗೂ ಕೂಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

8 /17

ಸಮಾಜ ಸೇವಕಿಯಾದ ಗನಗಾಂಬಿಕೆ ಮಲ್ಲಿಕಾರ್ಜುನ್‌, ಸಮಾಜ ಸೇವಕ ಗಣಗಾದರ್‌ ರಾಜು ಹಾಗೂ ಬಾಹ್ಯಾಕಾಶ ಮತ್ತು ರಕ್ಷಣಾ ತಜ್ಞ ಹಾಗೂ ಬರಹಗಾರರಾಗಿರುವ ಗಿರೀಶ್‌ ಲಿಂಗಣ್ಣ ಅವರಿಗೂ ಸಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

9 /17

ಇನ್ನೂ, ಸಮಾಜ ಸೇವಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಗೋಪಿ ಕೃಷ್ಣ, ಜೆ. ವೆಂಕಟೇಶ್‌ ಹಾಗೂ ಜಯಪ್ರಕಾಶ್‌ ಬೆಳ್ಳೆಕೆರೆ ಅವರಿಗೂ ಕೂಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

10 /17

ಸಮಾಜ ಸೇವಕರಾಗಿರುವ ಕೆ. ಎಂ ಸಂದೇಶ್‌, ಕೃಷ್ಣ ಮೂರ್ತಿ ಸಿ.ಎನ್‌, ಹಾಗೂ ಜ್ಯೋತಿಷಿಯಾಗಿರುವ ಎಂ.ಬಿ. ಜೋಷಿ ಅವರಿಗೂ ಸಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

11 /17

ಮಾಜಿ ಆಡಳಿತ ಪಕ್ಷದ ನಾಯಕರಾಗಿರುವ ಎಂ. ಶಿವರಾಜ್‌, ಪ್ರೊಫೆಸರ್‌ ಆಗಿರುವ ಎಂ.ವಿ. ಪ್ರಕಾಶ್‌ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿರುವ ನವೀನ್‌ ಕೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.  

12 /17

ಇನ್ನೂ ಸಮಾಜ ಸೇವಕಿಯಾಗಿ ತಮ್ಮನ್ನು ತಾವು ಗುರುತಿಸಿಕೊಂಡಿರುವ ನಿರ್ಮಲಾ ಸುರಾಪುರ, ಹೋಟೆಲ್‌ ಉದ್ಯಮಿಯಾಗಿರುವ ನರಸಿಂಹ ಮೂರ್ತಿ ಮದ್ಯಸ್ತ ಹಾಗೂ ಜ್ಯೋತಿಷಿ ಹಾಗೂ ವಾಸ್ತು ಸಲಹಾಗಾರರಾಗಿರುವ ಡಾ. ಪಂಡಿತ್‌ ಶ್ರೀ ಸಿದ್ದಾಂತ್‌ ಅರುಣ್‌ ಶರ್ಮಾ ಗುರುಜೀ ಅವರಿಗೂ ಪ್ರಶ್ತಿ ನೀಡಲಾಯಿತು.  

13 /17

ಜ್ಯೋತಿಷಿಗಳಾಗಿರುವ ರಾಘವೇಂದ್ರ ಕುಲಕರ್ಣಿ, ಸಮಾಜ ಸೇವಕರಾಗಿರುವ ರಾಮಲಿಂಗೇ ಗೌಡ ಹಾಗೂ ಅಸಿಸ್ಟೆಂಟ್‌ ಕಮೀಶನರ್‌ ಆಫ್‌ ಪೋಲಿಸ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ರೀನಾ ಸುವರ್ಣಾ. ಎನ್‌ ಅವರನ್ನು ಸಹ ಈ ಸಂದರ್ಭದಲ್ಲಿ ಗೌರವಿಸಲಾಯಿತು.  

14 /17

ಸಮಾಜ ಸೇವಕರಾಗಿರುವ ಎಸ್‌. ಕುಮಾರ್‌, ಉದ್ಯಮಿಯಾಗಿರುವ ಸಂಜಯ್‌ ಬೇಧ್‌ ಹಾಗೂ ಶಶಿಕುಮಾರ್‌ ತಿಮ್ಮಯ್ಯ ಅವರಿಗೂ ಗೌರವ ನೀಡಿ ಸನ್ಮಾನಿಸಲಾಯಿತು.  

15 /17

ರಾಷ್ಟ್ರೀಯ ಪ್ಯಾರಾಲಿಂಪಿಕ್ ತರಬೇತುದಾರರಾಗಿರುವ ಸತ್ಯ ನಾರಾಯಣ, ಸಮಾಜ ಸೇವಕ ಶಶಿಕುಮಾರ್‌ ಜಿ ಎಸ್‌ ಹಾಗೂ ಉದ್ಯಮಿಯಾಗಿರುವ ಸುಂದರ್‌ ರಾಜ್‌ ಪರಿಯವರಿಗೂ ಕೂಡ ಸನ್ಮಾನ ಮಾಡಿ ಗೌರವಿಸಲಾಯಿತು.  

16 /17

ಇನ್ನೂ, ಸುಪ್ರೀತ್‌ ಗರೂಜಿ, ಶಿಕ್ಷಣ ಸೇವೆ ಸಲ್ಲಿಸುತ್ತಿರುವ ಸುರೇಶ್‌ ಶಂಕರ್‌ ಜಟ್ಟಿ ಹಾಗೂ ಕನ್ನಡ  ಪರ ಕಾರ್ಯಕರ್ತ ಹಾಗೂ ಸಮಾಜ ಸೇವಕರಾಗಿರುವ ಯು.ಜೆ. ಮಲ್ಲಿಕಾರ್ಜುನ್‌ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.  

17 /17

ಇನ್ನೂ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಆಗಿರುವ ವೇಲು ನಾಯಕರ್‌, ಉದ್ಯಮಿಯಾರಿರುವ ವಿಶ್ವಾಸ್‌ ಟಿ. ಜಿ. ಹಾಗೂ ವೈ ಎನ್‌ ಸಿದ್ದೇ ಗೌಡ ಅವರಿಗೂ ಕೂಡ ಪ್ರಶಸ್ತಿ ನೀಡಿ ಗೌರವಸಲಾಯಿತು.