ಶಾಲೆಯಿಂದ ತಡವಾಗಿ ಬಂದ ಅಂತ 14 ವರ್ಷದ ಮಗನನ್ನೇ  ಹೊಡೆದು ಕೊಂದ ತಂದೆ..!

ಪೋಷಕರು ತಮ್ಮ ಮಕ್ಕಳನ್ನು ಶಿಸ್ತುಬದ್ಧವಾಗಿರುವಂತೆ ಹೇಳುವುದು ತಪ್ಪಲ್ಲ.. ಪುಟ್ಟ ಮಕ್ಕಳಿಗೆ ತಿಳಿಯುವ ರೀತಿ ಒಳ್ಳೆಯ ವಿಧಾನದಲ್ಲಿ ಹೇಳಿದರೆ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೆ.. ಇಲ್ಲೊಬ್ಬ ತಂದೆ ಶಾಲೆಯಿಂದ ಮಗ ತಡವಾಗಿ ಬಂದ ಅಂತ.. ಹೆಚ್ಚಿನ ಮಾಹಿತಿ ಇಲ್ಲಿದೆ..

Written by - Krishna N K | Last Updated : Feb 9, 2025, 03:16 PM IST
    • ಶಾಲೆಯಿಂದ ತಡವಾಗಿ ಬಂದ ಮಗನನ್ನು ಕೊಂದ ತಂದೆ
    • ಚೌಟುಪ್ಪಲ್ ಮಂಡಲದ ಅರೆಗುಡೆಮ್ ಗ್ರಾಮದಲ್ಲಿ ಘಟನೆ
    • ಬೀಳ್ಕೊಡುಗೆ ಕೂಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಸಾವು
ಶಾಲೆಯಿಂದ ತಡವಾಗಿ ಬಂದ ಅಂತ 14 ವರ್ಷದ ಮಗನನ್ನೇ  ಹೊಡೆದು ಕೊಂದ ತಂದೆ..! title=

ತೆಲಂಗಾಣ : ಶಾಲೆಯಿಂದ ತಡವಾಗಿ ಬಂದ ಮಗನನ್ನು ತಂದೆ ಕೊಂದಿರುವ ಘಟನೆ ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯ ಚೌಟುಪ್ಪಲ್ ಮಂಡಲದ ಅರೆಗುಡೆಮ್ ಗ್ರಾಮದಲ್ಲಿ ನಡೆದಿದೆ. ಕಟ್ಟಾ ಸೈದುಲು ಮಗನನ್ನು ಕೊಂದ ಆರೋಪಿ.. ಸೈದುಲು ಮತ್ತು ಆತನ ಹೆಂಡತಿ ಕೃಷಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು.. ಅವರಿಗೆ ಮೂವರು ಮಕ್ಕಳಿದ್ದಾರೆ. ಅವರನ್ನು ಖಾಸಗಿ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಇದರ ನಡುವೆ ಕೆಲವು ದಿನಗಳಿಂದ ಸೈದುಲು ಮದ್ಯದ ಚಟಕ್ಕೆ ಬಿದ್ದಿದ್ದ.. ನಿರಂತರವಾಗಿ ಮದ್ಯ ಸೇವಿಸಿ ತನ್ನ ಕುಟುಂಬ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದ...

ಕಿರಿಯ ಮಗ ಭಾನು (14) ಚೌಟುಪ್ಪಲ್‌ನ ಅನ್ನಾ ಮೆಮೋರಿಯಲ್ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿದ್ದಾನೆ. ಶನಿವಾರ (ಫೆಬ್ರವರಿ 8) ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಕೂಟದಲ್ಲಿ ಭಾನು ಕೂಡ ಭಾಗವಹಿಸಿದ್ದ. ಇದರಿಂದಾಗಿ ತಡರಾತ್ರಿ ಮನೆಗೆ ಬಂದಿದ್ದಾನೆ. ಇದರಿಂದ ಕೋಪಗೊಂಡ ಕುಡುಕ ತಂದೆ ಸೈದುಲು, ಭಾನುವನ್ನು ಹೊಡೆದಿದ್ದಾನೆ.. 

ಇದನ್ನೂ ಓದಿ:ಡಿವೋರ್ಸ್‌ ವದಂತಿ ಬೆನ್ನಲ್ಲೇ ಪಂಜಾಬಿ ನಟನೊಂದಿಗೆ ಕಾಣಿಸಿಕೊಂಡ ಧನಶ್ರೀ ವರ್ಮಾ.. ವಿಡಿಯೋ ವೈರಲ್‌

ಭಾನುವಿನ ಎದೆಗೆ ಬಲವಾದ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ತಕ್ಷಣ, ಚಿಂತಿತರಾದ ಕುಟುಂಬ ಸದಸ್ಯರು ಅವರನ್ನು ಚೌಟುಪ್ಪಲ್ಲೊದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಭಾನುವನ್ನು ಪರೀಕ್ಷಿಸಿದ ವೈದ್ಯರು ಅವನು ಈಗಾಗಲೇ ಮೃತಪಟ್ಟಿದ್ದಾನೆ ಎಂದು ಹೇಳಿದರು. ಮೃತದೇಹವನ್ನು ಚೌಟುಪ್ಪಲ್ ಸರ್ಕಾರಿ ಆಸ್ಪತ್ರೆಯಿಂದ ಮನೆಗೆ ತಂದ ಕುಟುಂಬ ಸದಸ್ಯರು, ಮರಣೋತ್ತರ ಪರೀಕ್ಷೆ ಬೇಡ ಅಂತ ಹೇಳಿದ್ದಾರೆ ಎನ್ನಲಾಗಿದೆ. 

ಈ ಘಟನೆಯ ಬಗ್ಗೆ ಸರ್ಕಾರಿ ಆಸ್ಪತ್ರೆ ಅಧಿಕಾರಿಗಳು ಸಹ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಲಿಲ್ಲ. ಏಕೆಂದರೆ ತಾನು ಹೊಡೆದಿದ್ದರಿಂದ ಮಗ ಸಾವನ್ನಪ್ಪಿದ್ದಾನೆ ಎಂದು ಯಾರಿಗೂ ಹೇಳಬಾರದೆಂದು ಸೈದುಲು ಬೆದರಿಕೆ ಹಾಕಿದ್ದ. ಕುಟುಂಬ ಸದಸ್ಯರು ಬೆಳಗಿನ ಜಾವದಲ್ಲಿ ಭಾನುವಿನ ದೇಹವನ್ನು ಸದ್ದಿಲ್ಲದೆ ಹೂಳಲು ಪ್ರಯತ್ನಿಸಿದರು. ಆದರೆ, ಗ್ರಾಮಸ್ಥರಿಂದ ವಿಷಯ ತಿಳಿದ ಪೊಲೀಸರು ಅಂತ್ಯಕ್ರಿಯೆಯನ್ನು ತಡೆದರು. ಇದರಿಂದ ಪೊಲೀಸರು ಮತ್ತು ಕುಟುಂಬ ಸದಸ್ಯರ ನಡುವೆ ವಾಗ್ವಾದ ನಡೆಯಿತು. 

ಇದನ್ನೂ ಓದಿ:ಕುಂಭಮೇಳದ ರೈಲಿನ ಟಾಯ್ಲೆಟ್‌ ರೂಂನಲ್ಲಿ.. ಥೂ.. ಹುಡುಗಿಯರಾಗಿ ಇಂಥಾ ಕೆಲಸ ಮಾಡೋದೆ..! ವಿಡಿಯೋ ವೈರಲ್..

ಕೊನೆಗೆ, ಭಾನುವನ್ನು ಅವನ ತಂದೆಯೇ ಕೊಂದಿದ್ದಾನೆಂದು ದೃಢಪಡಿಸಲಾಯಿತು. ಪೊಲೀಸರು ಭಾನುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಚೌಟುಪ್ಪಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಕುಡಿದ ಅಮಲಿನಲ್ಲಿ ಪುಟ್ಟ ಮಗನನ್ನು ಕೊಂದ ಸೈದುಲು ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News