Saturn Transit 2025: ಮಾರ್ಚ್ ತಿಂಗಳಿನಲ್ಲಿ ಎರಡು ಬಾರಿ ಕರ್ಮಫಲದಾತ ಶನಿದೇವರು ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ಇದರಿಂದ 4 ರಾಶಿಯವರಿಗೆ ಭರ್ಜರಿ ಲಾಟರಿ ಹೊಡೆಯಲಿದೆ. ಆ ಲಕ್ಕಿ ರಾಶಿಗಳು ಯಾವುವು ಎಂಬುದರ ಮಾಹಿತಿ ಇಲ್ಲಿದೆ ನೋಡಿ...
Saturn Transit 2025: ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವರನ್ನು ಬಹಳ ನಿಧಾನವಾಗಿ ಚಲಿಸುವ ಗ್ರಹವೆಂದು ಹೇಳಲಾಗುತ್ತದೆ. ಸುಮಾರು ಎರಡೂವರೆ ವರ್ಷಗಳ ನಂತರ ಶನಿಯು ತನ್ನ ರಾಶಿಯನ್ನ ಬದಲಾಯಿಸುತ್ತಾನೆ. ಜ್ಯೋತಿಷ್ಯದಲ್ಲಿ ಕರ್ಮಫಲದಾತ ಎಂದು ಕರೆಯುವ ಶನಿದೇವರಿಗೆ ಬಹಳ ಮಹತ್ವ ನೀಡಲಾಗಿದೆ. ಏಕೆಂದರೆ ಶನಿಯು ವ್ಯಕ್ತಿಯ ಕರ್ಮಗಳಿಗೆ ಅನುಸಾರವಾಗಿ ಫಲ ನೀಡುತ್ತಾನೆಂದು ಹೇಳಲಾಗುತ್ತದೆ. 2023ರ ನಂತರ ಈಗ (2025) ಶನಿಯು ತನ್ನ ರಾಶಿಯನ್ನ ಬದಲಾಯಿಸಲು ಸಜ್ಜಾಗಿದ್ದಾನೆ. 2025ರ ಮಾರ್ಚ್ 29ರಂದು ಶನಿಯು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಪ್ರಸ್ತುತ ಶನಿಯು ಕುಂಭ ರಾಶಿಯಲ್ಲಿ ಚಲಿಸುತ್ತಿದ್ದು, ಮಾರ್ಚ್ನಲ್ಲಿ ಕುಂಭ ರಾಶಿಯಿಂದ ಹೊರ ಬಂದು ಮೀನ ರಾಶಿಯನ್ನು ಪ್ರವೇಶಿಸುವನು. ಇದರಿಂದ ಕೆಲವು ರಾಶಿಗಳ ಮೇಲೆ ಶನಿ ಸಾಡೇಸಾತಿಯ ಹೆಚ್ಚಿನ ಪ್ರಭಾವ ನೋಡಬಹುದು. ಇದರೊಂದಿಗೆ ಶನಿಯ ಆಸ್ತಮವೂ ಆಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಶನಿ ಗ್ರಹವು ಫೆಬ್ರವರಿ ತಿಂಗಳ ಕೊನೆಯಲ್ಲಿ ಅಂದರೆ ಫೆಬ್ರವರಿ 28ರಂದು ಅಸ್ತಮಿಸಲಿದ್ದಾನೆ. ಮಾರ್ಚ್ ತಿಂಗಳ ಪೂರ್ತಿ ಅಸ್ತಮ ಸ್ಥಿತಿಯಲ್ಲಿಯೇ ಇರಲಿದ್ದಾನೆ. ಮಾರ್ಚ್ ತಿಂಗಳಲ್ಲಿ ಶನಿಯು ಎರಡು ಬಾರಿ ತನ್ನ ಸ್ಥಿತಿಯನ್ನು ಬದಲಾಯಿಸಲಿದ್ದಾನೆ. ಹೀಗಾಗಿ ಶನಿಯ ಅಸ್ತಮ ಮತ್ತು ಶನಿಯ ರಾಶಿ ಬದಲಾವಣೆಯಿಂದ ನಾಲ್ಕು ರಾಶಿಗೆ ಸೇರಿದ ಜನರ ಅದೃಷ್ಟ ಬದಲಾಗುವುದರೊಂದಿಗೆ ಹೆಚ್ಚಿನ ಶುಭ ಫಲಗಳ ಪ್ರಾಪ್ತಿಯಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುದು ಎಂದು ತಿಳಿಯಿರಿ...
ಶನಿಯ ಚಲನೆಯಲ್ಲಿ ಬದಲಾವಣೆಯಿಂದ ವೃಷಭ ರಾಶಿಗೆ ಸೇರಿದ ಜನರಿಗೆ ಹೆಚ್ಚಿನ ಲಾಭ ದೊರಕುವುದು. ಈ ಅವಧಿಯಲ್ಲಿ ನೀವು ಹಠಾತ್ ಧನ ಲಾಭ ಪಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೆಲಸ ಮತ್ತು ವ್ಯಾಪಾರದಲ್ಲಿ ವೃಷಭ ರಾಶಿಗೆ ಸೇರಿದ ಜನರು ಸಾಕಷ್ಟು ಪ್ರಗತಿ ಹೊಂದುವರು. ಈ ಸಮಯದಲ್ಲಿ ವೃಷಭ ರಾಶಿಗೆ ಸೇರಿದ ಜನರು ಸಾಲಗಳಿಂದ ಮುಕ್ತಿ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಶನಿಯ ಈ ಚಲನೆಯಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣವಿರಲಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸಗಳಲ್ಲಿ ಅಪಾರ ಯಶಸ್ಸು ಲಭಿಸಲಿದೆ. ಆದರೆ ನೀವು ನಿಮ್ಮ ಖರ್ಚುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಮೂಲಕ ಅನಗತ್ಯ ಖರ್ಚುಗಳನ್ನು ನಿಯಂತ್ರಣದಲ್ಲಿ ಇಡುವುದು ಉತ್ತಮ.
ಶನಿಯ ರಾಶಿ ಬದಲಾವಣೆ ಮತ್ತು ಅಸ್ತಮದಿಂದ ಕಟಕ ರಾಶಿಗೆ ಸೇರಿದ ಜನರ ಮೇಲೆ ಉತ್ತಮ ಪ್ರಭಾವ ನೋಡಬಹುದು. ನೀವು ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳನ್ನ ಪಡೆಯುತ್ತೀರಿ. ಕೆಲಸದಲ್ಲಿ ನಿಮಗೆ ಬಡ್ತಿ ದೊರಕುವ ಸಂಭವವಿದೆ. ಈ ಸಮಯದಲ್ಲಿ ಉತ್ತಮ ಪದವಿಗಾಗಿ ಕಾಯುತ್ತಿದ್ದಂತಹ ಈ ರಾಶಿಯ ಜನರಿಗೆ ಶನಿಯ ಚಲನೆಯಿಂದ ಸಂತೋಷದ ಸುದ್ದಿ ಲಭಿಸಲಿದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಸಾಕಷ್ಟು ಬಲಗೊಳ್ಳುವುದು. ಈ ಸಮಯದಲ್ಲಿ ವಿದೇಶಕ್ಕೆ ತೆರಳುವ ಉತ್ತಮ ಅವಕಾಶಗಳು ದೊರಕುವ ಸಂಭವವಿದೆ. ಶನಿಯ ಸಾಡೇಸಾತಿಯಿಂದ ನೀವು ಮುಕ್ತರಾಗುತ್ತೀರಿ. ಈ ಸಮಯದಲ್ಲಿ ನೀವು ಆರ್ಥಿಕ ಲಾಭವನ್ನು ಹೊಂದಬಹುದು. ನಿಮ್ಮ ಅದೃಷ್ಟ ಹೆಚ್ಚಾಗಲಿದ್ದು, ವ್ಯವಹಾರ ವಿಸ್ತರಣೆಯಾಗುವ ಸಂಭವವಿದೆ. ನಿಮ್ಮ ದೀರ್ಘಕಾಲದ ತೊಂದರೆಗಳು ಕೊನೆಗೊಳ್ಳುತ್ತವೆ.
ಮಕರ ರಾಶಿಗೆ ಸೇರಿದ ಜನರಿಗೆ ಶನಿಯು ಶುಭ ಫಲಗಳನ್ನು ನೀಡುವನು. ಈ ಅವಧಿಯಲ್ಲಿ ನಿಮಗೆ ವಿವಿಧ ಮಾರ್ಗಗಳಿಂದ ಧನ ಲಾಭದ ಯೋಗ ಸೃಷ್ಟಿಯಾಗಲಿದೆ. ಶನಿಯ ಈ ಚಲನೆಯಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಲಭಿಸುವುದು. ಈ ಅವಧಿಯಲ್ಲಿ ನಿಮ್ಮ ಸ್ನೇಹಿತನೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನೀವು ಈಗಾಗಲೇ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅವುಗಳಿಂದ ಮುಕ್ತಿ ದೊರಕಬಹುದು. ಆದರೆ ಈ ಅವಧಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ. ಮೀನ ರಾಶಿಯಲ್ಲಿ ಶನಿಯ ಸಂಚಾರದ ಮೂಲಕ ನೀವು ಯಶಸ್ಸನ್ನು ಸಾಧಿಸಬಹುದು. ವ್ಯವಹಾರದ ವಿಷಯದಲ್ಲಿ ನೀವು ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಪ್ರಯಾಣಿಸಬಹುದು, ಇದು ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರಲಿದೆ.
ಶನಿಯ ಚಲನೆಯಿಂದ ಧನು ರಾಶಿಗೆ ಸೇರಿದ ಜನರು ಹೆಚ್ಚಿನ ಆರ್ಥಿಕ ಲಾಭ ಪಡೆಯುವ ಸಾಧ್ಯತೆಯಿದೆ. ಈ ರಾಶಿಗೆ ಸೇರಿದ ಜನರ ಬ್ಯಾಂಕ್ ಬ್ಯಾಲೆನ್ಸ್ ಸಾಕಷ್ಟು ಹೆಚ್ಚಾಗಲಿದೆ. ಶನಿಯ ಚಲನೆಯ ಬದಲಾವಣೆಯಿಂದ ಈ ರಾಶಿಯ ಜನರು ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಪ್ರತಿಷ್ಠೆ ಪಡೆಯುತ್ತಾರೆ. ನಿಮ್ಮ ಜೀವನದಲ್ಲಿ ಸುಖ-ಸಮೃದ್ಧಿಯಲ್ಲಿ ಸಾಕಷ್ಟು ಹೆಚ್ಚಳವಾಗುವುದು. ವಿವಾಹಿತ ಜನರ ಜೀವನವು ಸಂತೋಷಮಯವಾಗಿರುವುದು. ತುಲಾ ರಾಶಿಯ ವ್ಯಕ್ತಿಗಳು ಶನಿಯ ಸಂಚಾರದಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು. ನೀವು ದೀರ್ಘಕಾಲದ ತೊಂದರೆಗಳಿಂದ ಮುಕ್ತಿ ಹೊಂದುವಿರಿ. ಈ ಸಮಯದಲ್ಲಿ ಹೊಸ ಉದ್ಯಮದ ಪ್ರಾರಂಭವು ನಿಮಗೆ ಯಶಸ್ಸನ್ನು ತರುತ್ತದೆ. ನೀವು ಕೆಲಸದ ಸ್ಥಳದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ. ಉದ್ಯೋಗದಲ್ಲಿರುವವರಿಗೆ ಶನಿಯ ಈ ಸಂಚಾರವು ಹೊಸ ಅವಕಾಶಗಳನ್ನು ತರಲಿದೆ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)