ಲವರ್‌ಗಾಗಿ ಸರಗಳ್ಳನಾದ ಬಿಜೆಪಿ ಮಾಜಿ ಶಾಸಕನ ಮಗ..! ರೆಡ್‌ ಹ್ಯಾಂಡ್‌ ಸಿಕ್ಕ MLA ಪುತ್ರನ ವಿಡಿಯೋ ವೈರಲ್‌..

MLA son as Thief : ಮಾಜಿ ಶಾಸಕರ ಮಗನೊಬ್ಬ ಮಾಡಿದ್ದನ್ನು ತಿಳಿದು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಈ ಪುಣ್ಯಾತ್ಮ ತನ್ನ ಗೆಳತಿಗಾಗಿ ಕಳ್ಳನಾಗಿ ಬದಲಾಗಿದ್ದು, ಇದೀಗ ಕುಟುಂಬದ ಗೌರವವನ್ನು ಹಾಳುಮಾಡುವ ಕೆಲಸ ಮಾಡಿದ್ದಾನೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..

Written by - Krishna N K | Last Updated : Feb 6, 2025, 01:06 PM IST
    • ಮಾಜಿ ಶಾಸಕರ ಮಗನೊಬ್ಬ ಮಾಡಿದ್ದನ್ನು ತಿಳಿದು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ.
    • ಇಲ್ಲೊಬ್ಬ ರಾಜಕೀಯ ಮುಖಂಡನ ಪುತ್ರ ಕಳ್ಳನಾಗಿದ್ದಾನೆ.
    • ಇದೀಗ ಕುಟುಂಬದ ಗೌರವವನ್ನು ಹಾಳುಮಾಡುವ ಕೆಲಸ ಮಾಡಿದ್ದಾನೆ.
ಲವರ್‌ಗಾಗಿ ಸರಗಳ್ಳನಾದ ಬಿಜೆಪಿ ಮಾಜಿ ಶಾಸಕನ ಮಗ..! ರೆಡ್‌ ಹ್ಯಾಂಡ್‌ ಸಿಕ್ಕ MLA ಪುತ್ರನ ವಿಡಿಯೋ ವೈರಲ್‌.. title=

Viral News : ಇತ್ತೀಚಿನ ದಿನಗಳಲ್ಲಿ, ನಟನ ಮಗ ನಟನಾಗುತ್ತಿದ್ದಾನೆ.. ರಾಜಕಾರಣಿ ಮಗ ರಾಜಕೀಯಕ್ಕೆ ಬರುತ್ತಿದ್ದಾರೆ.. ಆದರೆ ಇಲ್ಲೊಬ್ಬ ರಾಜಕೀಯ ಮುಖಂಡನ ಪುತ್ರ ಕಳ್ಳನಾಗಿದ್ದಾನೆ. ಅಲ್ಲದೆ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯ ಸರಗಳ್ಳತನ ಮಾಡಿದ ಸಿಕ್ಕುಬಿದ್ದಿದ್ದಾನೆ..

ಹೌದು.. ಗುಜರಾತ್‌ನ ಮಾಜಿ ಶಾಸಕರೊಬ್ಬರ ಮಗನ ಇತ್ತೀಚಿನ ಕೃತ್ಯಗಳ ಬಗ್ಗೆ ತಿಳಿದು ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಗೆಳತಿಗಾಗಿ ಎಂಎಲ್‌ಎ ಮಗ ಕಳ್ಳನಾಗಿ ಬದಲಾಗಿದ್ದಾನೆ. ವಿವರಗಳನ್ನು ನೋಡುವುದಾದರೆ... ಇತ್ತೀಚೆಗೆ ಅಹಮದಾಬಾದ್‌ನಲ್ಲಿ ಒಂದು ಕಳ್ಳತನ ನಡೆದಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಳ್ಳನನ್ನು ಗುರುತಿಸಿ ಬಂಧಿಸಲಾಗಿದೆ. ತನಿಖೆಯಲ್ಲಿ ಆತ ಮಾಜಿ ಶಾಸಕ ವಿಜೇಂದ್ರ ಸಿಂಗ್ ಚಂದ್ರಾವತ್ ಅವರ ಪುತ್ರ ಪ್ರದ್ಯುಮ್ನ ಸಿಂಗ್ ಚಂದ್ರಾವತ್ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಮಕ್ಕಳಾಗಲ್ಲ ಅಂತಲ್ಲ.. 30 ವರ್ಷದ ನಂತರ ಮದುವೆಯಾಗೋದು ಖಂಡಿತ ಒಳ್ಳೆಯದಲ್ಲ! ಇದಕ್ಕಿರೋ ಕಾರಣ ಬೇರೆನೇ..   

ವಿಜೇಂದ್ರ ಅವರು ಈ ಹಿಂದೆ ಮಧ್ಯಪ್ರದೇಶದ ನೀಮಚ್ ಜಿಲ್ಲೆಯ ಮಾನ್ಸಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಕಳೆದ ತಿಂಗಳು 25 ರಂದು ಪ್ರದ್ಯುಮ್ನ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಕಸಿದುಕೊಂಡಿದ್ದ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಶಂಕಿತನನ್ನು ಗುರುತಿಸಿ ಬಂಧಿಸಿದಾಗ ಸತ್ಯ ಹೊರಬಂದಿತು.

ಗೆಳತಿಯ ಸಲುವಾಗಿ : ತನ್ನ ಗೆಳತಿಯ ಅಗತ್ಯಗಳನ್ನು ಪೂರೈಸಲು ನಾನು ಈ ಕೆಲಸ ಮಾಡಬೇಕಾಗಿ ಬಂತು ಎಂದು ಆರೋಪಿ ಹೇಳಿಕೊಂಡಿದ್ದಾನೆ. ತನಗೆ ಮಾಸಿಕ 15,000 ರೂ. ಸಂಬಳ ಬರುತ್ತಿದ್ದು, ಆ ಹಣದಿಂದ ತನ್ನ ಗೆಳತಿಯ ಐಷಾರಾಮಿ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.  

ಇದನ್ನೂ ಓದಿ:ವಾಟ್ಸಾಪ್ ಖಾತೆಗಳ ಮೇಲೆ ಹ್ಯಾಕರ್‌ಗಳ ವಕ್ರ ದೃಷ್ಟಿ: ಸೈಬರ್ ದಾಳಿ ದೃಢಪಡಿಸಿದ ಮೆಟಾ

ತಾನು ಶಾಸಕರ ಮಗನಾಗಿದ್ದರೂ ಮನೆಯಿಂದ ಓಡಿಹೋಗಿದ್ದಾಗಿ ಪ್ರದ್ಯುಮ್ನ ಪೊಲೀಸರಿಗೆ ಹೇಳಿದ್ದಾನೆ. ಸದ್ಯ ಆರೋಪಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ. ಪ್ರಸ್ತುತ ಆತ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ತಂದೆ ಶಾಸಕ : ವಿಜೇಂದ್ರ ಸಿಂಗ್ ಚಂದ್ರಾವತ್ 2008 ರಲ್ಲಿ ಮಾನ್ಸಾ ಕ್ಷೇತ್ರದಿಂದ ಶಾಸಕರಾಗಿ ಗೆದ್ದರು. ಆ ಸಮಯದಲ್ಲಿ ಅವರು ಕಾಂಗ್ರೆಸ್‌ನಲ್ಲಿದ್ದರು. ನಂತರ, ಅವರು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಬಿಜೆಪಿ ಸೇರಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News