ಹಣಕೊಟ್ಟು ಸೈಟ್ ಪಡೆಯದ ವ್ಯಕ್ತಿಗೆ ಪರಿಹಾರ ಒದಗಿಸಿಕೊಟ್ಟ ಗ್ರಾಹಕರ ಆಯೋಗ

 ದೂರುದಾರರು ಹಾಕಿದ ದಾಖಲೆ ಪತ್ರಗಳನ್ನು ಆಯೋಗ ಪರಿಶೀಲಿಸಿದಾಗ ಎದುರುದಾರರಿಗೆ ಮುಂಗಡವಾಗಿ ರೂ.10,00,000 ಗಳನ್ನು ಪಾವತಿಸಿರುವುದು ಮತ್ತು ಆ ಹಣ ಪಡೆದು ಎದುರುದಾರ ದೂರುದಾರರಿಗೆ ನೋಂದಾಯಿತ ಖರೀದಿ ಕರಾರು ಪತ್ರ ಮಾಡಿಕೊಂಡಿರುವುದು ಸಾಭೀತಾಗಿದೆ.

Written by - Manjunath N | Last Updated : Feb 4, 2025, 07:30 PM IST
  • ಆ ಹಣವನ್ನು ಆಯೋಗದಲ್ಲಿ ಡಿಪಾಜಿಟ್ ಇಡಬೇಕು ಅಂತಾ ದೂರುದಾರರಿಗೆ ಸೂಚಿಸಿದೆ.
  • ಒಂದು ತಿಂಗಳ ಒಳಗಾಗಿ ಎದುರುದಾರರು ಖರೀದಿ ಪತ್ರವನ್ನು ದೂರುದಾರರಿಗೆ ಮಾಡಿಕೊಡಬೇಕು
  • ಕಮೀಷನರ್ ಮುಖಾಂತರ ಪ್ಲಾಟನ ಖರೀದಿ ಕರಾರು ಪತ್ರವನ್ನು ಮಾಡಿಸಿಕೊಳ್ಳಬೇಕೆಂದು ಆದೇಶಿಸಿದೆ.
 ಹಣಕೊಟ್ಟು ಸೈಟ್ ಪಡೆಯದ ವ್ಯಕ್ತಿಗೆ ಪರಿಹಾರ ಒದಗಿಸಿಕೊಟ್ಟ ಗ್ರಾಹಕರ ಆಯೋಗ title=

ಧಾರವಾಡ : ಧಾರವಾಡ ಜಿಲ್ಲೆಯ ಸತ್ತೂರಿನ ನಿವಾಸಿ ಶಿವಾನಂದ ಹೆರಕಲ್ ಎಂಬುವವರು ಎದುರುದಾರರಾದ ರಾಘವೇಂದ್ರ ಗಬ್ಬೂರರವರಿಗೆ ದಿ:27/06/2023 ರಂದು ರೂ.13,00,000 ಗಳ ಹಣ ಕೊಟ್ಟು ಅವರ ಸತ್ತೂರ ಕೆ.ಎಚ್.ಬಿ. ಲೇಔಟನ ಪ್ಲಾಟ ಎಚ್.ಆಯ್.ಜಿ.807 ನ್ನು ಖರೀದಿಸಿದ್ದರು.

ಈ ಬಗ್ಗೆ ಉಭಯತರ ಮಧ್ಯೆ ಕರಾರು ಒಪ್ಪಂದ ಪತ್ರ ಆಗಿತ್ತು. ಕರಾರಿನಂತೆ ರೂ.10,00,000 ಗಳನ್ನು ಮುಂಗಡ ಹಣ ಎದುರುದಾರರಿಗೆ ಪಾವತಿಸಿದ್ದರು. ಉಳಿದ ರೂ.3,00,000 ಗಳನ್ನು ಖರೀದಿ ಪತ್ರ ನೋಂದಣಿ ಮಾಡುವ ಕಾಲಕ್ಕೆ ಕೊಡುವುದು ಅಂತಾ ಒಪ್ಪಂದವಾಗಿತ್ತು. ಬಾಕಿ ಹಣ ಪಡೆದು ಖರೀದಿ ಪತ್ರ ಮಾಡಿ ಕೊಡುವಂತೆ ದೂರುದಾರರು ಎದುರುದಾರರಲ್ಲಿ ಸಾಕಷ್ಟು ಸಲ ವಿನಂತಿಸಿದರೂ ಎದುರುದಾರರು ಖರೀದಿ ಪತ್ರ ಮಾಡಿ ಕೊಟ್ಟಿರಲಿಲ್ಲ.ಇದರಿಂದ ಮನನೊಂದ ದೂರುದಾರ ಎದುರುದಾರರ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆಆಗುತ್ತದೆಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:04/10/2024 ರಂದುದೂರನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಟಾಕೀಸ್ ನಲ್ಲಿ ಮಹಾತ್ಮ ಗಾಂಧೀಜಿ ನೋಡಿದ ಏಕೈಕ ಸಿನಿಮಾ ಯಾವುದು ಗೊತ್ತಾ..?

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಹಾಕಿದ ದಾಖಲೆ ಪತ್ರಗಳನ್ನು ಆಯೋಗ ಪರಿಶೀಲಿಸಿದಾಗ ಎದುರುದಾರರಿಗೆ ಮುಂಗಡವಾಗಿ ರೂ.10,00,000 ಗಳನ್ನು ಪಾವತಿಸಿರುವುದು ಮತ್ತು ಆ ಹಣ ಪಡೆದು ಎದುರುದಾರ ದೂರುದಾರರಿಗೆ ನೋಂದಾಯಿತ ಖರೀದಿ ಕರಾರು ಪತ್ರ ಮಾಡಿಕೊಂಡಿರುವುದು ಸಾಭೀತಾಗಿದೆ.ಅಲ್ಲದೇ ಆಯೋಗ ನೀಡಿದ ನೋಟಿಸಿಗೂ ಎದುರುದಾರರು ಹಾಜರಾಗಿ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಿರುವುದಿಲ್ಲ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದಾಗ ಖರೀದಿ ಕರಾರು ಪತ್ರದ ನಿಯಮದಂತೆ ಎದುರುದಾರರು ಬಾಕಿ ಹಣ ರೂ.3,00,000 ಗಳನ್ನು ಪಡೆದು ದೂರುದಾರರಿಗೆ ಖರೀದಿ ಪತ್ರ ನೋಂದಣಿ ಮಾಡಿ ಕೊಡಬೇಕಾಗುತ್ತದೆ ಅಂತಾ ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.

ಇದನ್ನೂ ಓದಿ: ಶ್ರೀರಾಮುಲು ʻಕೈʼ ಹಿಡಿಯುತ್ತಾರೆ ವದಂತಿ ಮಧ್ಯೆ ಚುರುಕು

ಆದೇಶವಾದ ಒಂದು ತಿಂಗಳ ಒಳಗಾಗಿ ಬಾಕಿ ಉಳಿದ ರೂ.3,00,000 ಗಳನ್ನು ಎದುರುದಾರರಿಗೆ ಪಾವತಿಸಿಬೇಕು ಅಥವಾ ಆ ಹಣವನ್ನು ಆಯೋಗದಲ್ಲಿ ಡಿಪಾಜಿಟ್ ಇಡಬೇಕು ಅಂತಾ ದೂರುದಾರರಿಗೆ ಸೂಚಿಸಿದೆ. ಒಂದು ತಿಂಗಳ ಒಳಗಾಗಿ ಎದುರುದಾರರು ಖರೀದಿ ಪತ್ರವನ್ನು ದೂರುದಾರರಿಗೆ ಮಾಡಿಕೊಡಬೇಕು ಒಂದು ವೇಳೆ ತಪ್ಪಿದ್ದಲ್ಲಿ ದೂರುದಾರರು ಆ ಬಾಕಿ ಹಣವನ್ನು ಆಯೋಗಕ್ಕೆ ಪಾವತಿಸಿ ಕೋರ್ಟ ಕಮೀಷನರ್ ಮುಖಾಂತರ ಪ್ಲಾಟನ ಖರೀದಿ ಕರಾರು ಪತ್ರವನ್ನು ಮಾಡಿಸಿಕೊಳ್ಳಬೇಕೆಂದು ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News