ಜ. 22ಕ್ಕೆ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಮೊದಲ ವಾರ್ಷಿಕೋತ್ಸವ ನಡೆಯಲ್ಲ ಏಕೆ?

Ayodya Rama Mandir: 2025ರ ಜನವರಿ 22ನೇ ತಾರೀಖು ಮಂದಿರದ ಮತ್ತು ಪ್ರಾಣಪ್ರತಿಷ್ಠಾಪನೆಯ ವಾರ್ಷಿಕೋತ್ಸವ ನಡೆಯಬೇಕಿತ್ತು. ಸದ್ಯದ ಮಾಹಿತಿಗಳ ಪ್ರಕಾರ ಅಂದು ವಾರ್ಷಿಕೋತ್ಸವ ನಡೆಯುತ್ತಿಲ್ಲ. 

Written by - Yashaswini V | Last Updated : Dec 10, 2024, 09:51 AM IST
  • ಕಳೆದ ವರ್ಷ ಅಂದರೆ 2024ರ ಜನವರಿ 22ನೇ ತಾರೀಖು ಗರ್ಭಗುಡಿಯಲ್ಲಿ ಇರುವ 51 ಇಂಚಿನ ರಾಮ ಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಮಾಡಲಾಗಿತ್ತು.
  • ಅದರ ಪ್ರಕಾರವಾಗಿ 2025ರ ಜನವರಿ 22ನೇ ತಾರೀಖು ಮಂದಿರದ ಮತ್ತು ಪ್ರಾಣಪ್ರತಿಷ್ಠಾಪನೆಯ ವಾರ್ಷಿಕೋತ್ಸವ ನಡೆಯಬೇಕಿತ್ತು.
  • ಸದ್ಯದ ಮಾಹಿತಿಗಳ ಪ್ರಕಾರ ಅಂದು ವಾರ್ಷಿಕೋತ್ಸವ ನಡೆಯುತ್ತಿಲ್ಲ.
ಜ. 22ಕ್ಕೆ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಮೊದಲ ವಾರ್ಷಿಕೋತ್ಸವ ನಡೆಯಲ್ಲ ಏಕೆ?  title=
Ram Mandir Pranpratishtana Anniversary

Ayodya Rama Mandir: ಉತ್ತರ ಪ್ರದೇಶದ ಅಯೋಧ್ಯೇಯಲ್ಲಿ 2024ರ ಜನವರಿ 22ನೇ ತಾರೀಖು ರಾಮಮಂದಿರದ ಉದ್ಘಾಟನೆಯಾಗಿತ್ತು. ರಾಮ ಲಲ್ಲಾನ ಪ್ರಾಣಪ್ರತಿಷ್ಠೆಯಾಗಿತ್ತು. ಹಾಗಾಗಿ 2025ರ ಜನವರಿ 22ನೇ ತಾರೀಖು ಮೊದಲ ವಾರ್ಷಿಕೋತ್ಸವ ನಡೆಯಬೇಕಿತ್ತು. ಆದರೆ ಅಂದು ನಡೆಯುತ್ತಿಲ್ಲ.

2025ರ ಜನವರಿ 22ನೇ ತಾರೀಖು ಮಂದಿರದ ಮತ್ತು ಪ್ರಾಣಪ್ರತಿಷ್ಠಾಪನೆಯ ವಾರ್ಷಿಕೋತ್ಸವ ನಡೆಯಬೇಕಿತ್ತು. ಸದ್ಯದ ಮಾಹಿತಿಗಳ ಪ್ರಕಾರ ಅಂದು ವಾರ್ಷಿಕೋತ್ಸವ ನಡೆಯುತ್ತಿಲ್ಲ. 

ರಾಮ ದೇವಸ್ಥಾನದ ಟ್ರಸ್ಟ್ ಮಾಹಿತಿಗಳ ಪ್ರಕಾರ, 2025ರ ಜನವರಿ 22ನೇ ತಾರೀಖಿನ ಬದಲಿಗೆ 2025ರ ಜನವರಿ 21ನೇ ತಾರೀಖು ವಾರ್ಷಿಕೋತ್ಸವ ನೆರವೇರಿಸಲಾಗುತ್ತದೆ. 

ಹಿಂದೂ ಪಂಚಾಗದ ಪ್ರಕಾರ ರಾಮ ಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಶುಕ್ಲ ಪಕ್ಷದ ದ್ವಾದಶಿಯ ದಿನ ನಡೆದಿದೆ. ಈ ಬಾರಿಯೂ ಹಾಗೇ ವಾರ್ಷಿಕೋತ್ಸವ ನಡೆಸಲಾಗುವುದು ಎನ್ನುತ್ತದೆ ಟ್ರಸ್ಟ್.

ಇದನ್ನೂ ಓದಿ- ಉದ್ಗಾಟನೆಯಾದರೂ ಮುಗಿಯದ ಅಯೋಧ್ಯೆ ರಾಮಮಂದಿರ ಕಾಮಗಾರಿ, ಮಂದಿರ ಪೂರ್ಣಗೊಳ್ಳಲು ತಡವಾಗುತ್ತಿರುವುದೇಕೆ?

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ಕಟ್ಟಲಾಗಿರುವ ರಾಮನ ದೇವಸ್ಥಾನದಲ್ಲಿ ಕಳೆದ ವರ್ಷ ಅಂದರೆ 2024ರ ಜನವರಿ 22ನೇ ತಾರೀಖು ಗರ್ಭಗುಡಿಯಲ್ಲಿ ಇರುವ 51 ಇಂಚಿನ ರಾಮ ಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಮಾಡಲಾಗಿತ್ತು. ಅದರ ಪ್ರಕಾರವಾಗಿ 2025ರ ಜನವರಿ 22ನೇ ತಾರೀಖು ಮಂದಿರದ ಮತ್ತು ಪ್ರಾಣಪ್ರತಿಷ್ಠಾಪನೆಯ ವಾರ್ಷಿಕೋತ್ಸವ ನಡೆಯಬೇಕಿತ್ತು. ಸದ್ಯದ ಮಾಹಿತಿಗಳ ಪ್ರಕಾರ ಅಂದು ವಾರ್ಷಿಕೋತ್ಸವ ನಡೆಯುತ್ತಿಲ್ಲ. 

ರಾಮ ದೇವಸ್ಥಾನದ ಟ್ರಸ್ಟ್ ಮಾಹಿತಿಗಳ ಪ್ರಕಾರ 2025ರ ಜನವರಿ 22ನೇ ತಾರೀಖಿನ ಬದಲಿಗೆ 2025ರ ಜನವರಿ 21ನೇ ತಾರೀಖು ವಾರ್ಷಿಕೋತ್ಸವ ನೆರವೇರಿಸಲಾಗುತ್ತದೆ. ಇದರ ಹಿಂದೆ ಪ್ರಮುಖ ಕಾರಣ ಇದೆ. ಹಿಂದೂ ಧರ್ಮದಲ್ಲಿ ಎಲ್ಲಾ ಹಬ್ಬ-ಹರಿದಿನಗಳನ್ನು ಹಿಂದೂ ಪಂಚಾಂಗದ ಪ್ರಕಾರವೇ ಆಚರಿಸಲಾಗುತ್ತದೆ. ಹಿಂದೂ ಪಂಚಾಗದ ಪ್ರಕಾರ ರಾಮ ಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠಾಪನೆ ಶುಕ್ಲ ಪಕ್ಷ ದ್ವಾದಶಿಯ ದಿನ ನಡೆದಿದೆ. ಇದನ್ನು ಕೂರ್ಮ ದ್ವಾದಶಿ ಅಂತಲೂ ಹೇಳಲಾಗುತ್ತದೆ. ಈ ಬಾರಿ ಪೌಶ್ ಶುಕ್ಲ ದ್ವಾದಶಿ 2025ರ ಜನವರಿ 21ನೇ ತಾರೀಖು ಬರುವುದುದರಿಂದ ಅಂದು ಪ್ರಾಣಪ್ರತಿಷ್ಠಾಪನೆಯ ವಾರ್ಷಿಕೋತ್ಸವ ನಡೆಸಲಾಗುವುದು ಎನ್ನುತ್ತದೆ ಟ್ರಸ್ಟ್.

ದೇವಾಲಯದ ಟ್ರಸ್ಟ್ ಸಂತರೊಂದಿಗೆ ಸಮಾಲೋಚನೆ ನಡೆಸಿಯೇ ಪ್ರಾಣಪ್ರತಿಷ್ಠಾಪನೆಯ ವಾರ್ಷಿಕೋತ್ಸವವನ್ನು ಹಿಂದೂ ಪಂಚಾಂಗದ ಪ್ರಕಾರ ನಡೆಸಲು ನಿರ್ಧರಿಸಿದೆ. ಇದರ ಬಗ್ಗೆ ಈ ಹಿಂದೆಯೇ ಟ್ರಸ್ಟ್ ತನ್ನ X ಖಾತೆಯಲ್ಲಿ ಮಾಹಿತಿ ನೀಡಿದೆ. ಆದರೆ ಕಳೆದ ವರ್ಷ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ಸಲ ಮೊದಲ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಭಾಗವಹಿಸುತ್ತಾರಾ ಇಲ್ಲವಾ ಎಂಬುದು ಈವರೆಗೆ ತಿಳಿದುಬಂದಿಲ್ಲ. 

ಇದನ್ನೂ ಓದಿ- Ram Mandir: ಕನ್ನಡದಲ್ಲಿ ಬರಲಿದೆ ಅಯೋಧ್ಯೆ ಶ್ರೀರಾಮಮಂದಿರದ ಬಯೋಪಿಕ್!!

ಇನ್ನು ಶ್ರೀರಾಮನ ದೇವಸ್ಥಾನದ ನಿರ್ಮಾಣ ಕೆಲಸ ಯಾವಾಗ ಕೊನೆಗೊಳ್ಳುತ್ತದೆ ಎನ್ನುವ ಪ್ರಶ್ನೆ ಕೂಡ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, 2025ರ ಸೆಪ್ಟೆಂಬರ್ ಒಳಗೆ ಮುಗಿಯುವ ಸಾಧ್ಯತೆ ಇದೆ ಎಂದು ಹೇಳಿದ್ದರು. ದೇವಸ್ಥಾನದ ಮೊದಲ ಮಹಡಿಯಲ್ಲಿ ಕೆಲ ಬದಲಾವಣೆ ಮಾಡುತ್ತಿರುವುದರಿಂದ ಮತ್ತು ಕಾರ್ಮಿಕರ ಕೊರತೆಯಿಂದಾಗಿ ಕಾಮಗಾರಿ ವಿಳಂಬ ಆಗುತ್ತಿದೆ ಎನ್ನುವ ಕಾರಣವನ್ನೂ ಅವರು ನೀಡಿದ್ದಾರೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News