ಈ ಹಿಂದೆ ಎಂದು ನೀಡದ ಪ್ರಶಸ್ತಿಯನ್ನು ಬಿಸಿಸಿಐ ಈ ಬರಿ ವಿಶ್ವಕಪ್ ವಿಜೇತ ತಂಡಕ್ಕೆ ನೀಡಿದೆ.
ಫೆ ೧ ರಂದು ಬಿಸಿಸಿಐ ವಾರ್ಷಿಕ ಪ್ರಶಸ್ತಿ ವೇಳೆ 2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಿಗೆ ವಿಶೇಷ ವಜ್ರದುಂಗುರ ನೀಡಿದೆ. ಮಾಹಿತಿಯನ್ನು ಟ್ವಿಟ್ ಮಾಡುವ ಮೂಲಕ ಬಿಸಿಸಿಐ ಇದನ್ನು ಬಹಿರಂಗಪಡಿಸಿದೆ. ಶುದ್ದ ಚಿನ್ನ ಮತ್ತು, ವಜ್ರದಿಂದ ಸಿದ್ಧಪಡಿಸಿದ ಈ ಉಂಗುರವನ್ನು ಡೀಮ್ 11 ಭಾರತೀಯ ಆಟಗಾರರಿಗೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಈಗ ಸದ್ದು ಮಾಡುತ್ತಿದೆ. ಆದ್ರೆ ಈ ಸಮಯದಲ್ಲಿ ವಿರಾಟ್ ಕೊಹ್ಲಿ ವಿಜೇತ ತಂಡದಲ್ಲಿದ್ದರು ಕೂಡ ಅವ್ರು ರಣಜಿ ಟ್ರೋಫಿಯ ಆಟದಲ್ಲಿ ಬ್ಯುಸಿ ಆಗಿದ್ದ ಕಾರಣ ಅವರಿಗೆ ಈ ಬಹುಮಾನ ಸ್ವೀಕರಿಸಲು ಸಾಧ್ಯವಾಗಲಿಲ್ಲ.
ಉಂಗುರದ ವಿಶೇಷವೇನು?:
ಶುದ್ದ ಚಿನ್ನ ವಜ್ರದ ಮೂಲಕ ಉಂಗುರ ಸಿದ್ದಪಡಿಸಲಾಗಿದೆ. ಇದರಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಉಂಗುರದ ಮಧ್ಯಭಾಗದಲ್ಲಿ ಅಶೋಕ ಚಕ್ರದ ಚಿತ್ರವಿದೆ. ಇದರ ಸುತ್ತ 'ಇಂಡಿಯಾ ಟಿ20 ವರ್ಲ್ಡ್ ಚಾಂಪಿಯನ್ಸ್ 2024' ಎಂದು ಇಂಗ್ಲಿಷ್ ನಲ್ಲಿ ಬರೆಯಲ್ಪಟ್ಟಿದೆ.
2024ರ ಟಿ20 ವಿಶ್ವಕಪ್ ವಿಜಯ ಭಾರತೀಯರಿಗೆ ಅತ್ಯಂತ ಮಹತ್ವದ್ದು. ಫೈನಲ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ರೋಚಕವಾಗಿದ್ದ ಪಂದ್ಯ ಆಫ್ರಿಕಾ ವಿರುದ್ಧ 7 ರನ್ಗಳಿಂದ ಗೆದ್ದಿತ್ತು. ಆ ಮೂಲಕ 13 ವರ್ಷಗಳ ವಿಶ್ವಕಪ್ ಭಾರತ ತಂಡ ತನ್ನದಾಗಿಸಿಕೊಂಡಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ