ವಂಚನೆ ಕೇಸಲ್ಲಿ ಐಶ್ವರ್ಯ, ಪತಿ ಹರೀಶ್ ಅರೆಸ್ಟ್ : ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

Aishwarya Fraud case : ಕೊನೆಗೂ ಐಶ್ವರ್ಯ ಅನ್ನೋ ಚಾಲಕಿ ಮಹಿಳೆ ಹಾಗೂ ಆಕೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ. ಅದೇ ಕೇಸ್ ಈಗ ಹೊಸ ಹೊಸ ತಿರುವು ಪಡೆದುಕೊಂಡಿದ್ದು, ಮಾಜಿ ಸಂಸದ ಡಿಕೆ ಸುರೇಶ್ ಕೂಡ ಪ್ರತಿಕ್ರಿಯೆ ಕೊಟ್ಟಿದ್ದಾರೆ.. ಈ ಮಧ್ಯೆ ದೂರುದಾರೆ ಸಹ ವಿಚಾರಣೆ ಎದುರಿಸಿದ್ದಾರೆ.

Written by - VISHWANATH HARIHARA | Last Updated : Dec 28, 2024, 08:16 PM IST
    • ಕೊನೆಗೂ ಐಶ್ವರ್ಯ ಅನ್ನೋ ಚಾಲಕಿ ಮಹಿಳೆ ಹಾಗೂ ಆಕೆಯ ಗಂಡನನ್ನು ಪೊಲೀಸರು ಬಂಧಿಸಿದ್ದಾರೆ.
    • ದೊಡ್ಡವರ ಸಂಪರ್ಕ‌ ನನಗಿಂತ ಜಾಸ್ತಿ ವನಿತಾಗೆ ಇದೆ.
    • ಕಪ್ಪು ಹಣ ಪಡೆದು ಬ್ಲಾಕ್ ಅಂಡ್ ವೈಟ್ ದಂಧೆ ಮಾಡಿದ್ದಾಳೆ.
ವಂಚನೆ ಕೇಸಲ್ಲಿ ಐಶ್ವರ್ಯ, ಪತಿ ಹರೀಶ್ ಅರೆಸ್ಟ್ : ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ title=

Aishwarya Gowda Fraud case : ಇವತ್ತು ಬೆಳ್ಳಂಬೆಳಗ್ಗೆ ವರಾಹೀ ಜ್ಯೂವೆಲ್ಲರಿ ಮಾಲಕಿ ವನಿತಾಳ ಫೋಟೋ ರಿಲೀಸ್ ಮಾಡಿದ್ದ ಆರೋಪಿ ಐಶ್ವರ್ಯ, ಗಣ್ಯ ವ್ಯಕ್ತಿಗಳ ಪರಿಚಯ ಮಾಡಿಕೊಂಡು ಕಪ್ಪು ಹಣ ಪಡೆದು ಬ್ಲಾಕ್ ಅಂಡ್ ವೈಟ್ ದಂಧೆ ಮಾಡಿದ್ದಾಳೆ. ದೊಡ್ಡವರ ಸಂಪರ್ಕ‌ ನನಗಿಂತ ಜಾಸ್ತಿ ವನಿತಾಗೆ ಇದೆ. ಎಲ್ಲರನ್ನು ಅಂಗಡಿಗೆ ಕರೆಸಿ ಆಕೆಯ ಅಂಗಡಿ ತೋರಿಸ್ತಿದ್ದಳು. 

ಈ ಅಂಗಡಿ ನನ್ನದು ಮಾತ್ರವಲ್ಲ ಈ ಶೋ ರೂಂ ನಿಮ್ಮದೆ, ನಿಮ್ಮ ಬ್ಲಾಕ್ ಮನಿ ವೈಟ್ ಮಾಡ್ತಿನಿ. ನಿಮ್ಮ ಫಂಡ್ ತಂದು ಇಲ್ಲಿ ಹಾಕಿ ಅಂತಾ ಆಕೆ ಸಾಕಷ್ಟು ಜನರಿಗೆ ಮೋಸ ಮಾಡಿದ್ದಾಳೆ. ನನ್ನ ಮತ್ತು ವನಿತಾ ಸಂಬಂಧ ಚಿನ್ನ,ದುಡ್ಡು ವಿಷಯಕ್ಕೆ ಸೀಮಿತವಾಗಿಲ್ಲ ಅನ್ನೋದನ್ನ ಮಾರ್ಮಿಕವಾಗಿ ನುಡಿದಿದ್ದಾಳೆ. ಅಲ್ಲದೇ ಆಕೆಯ ಓಂಕಾರ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಫಂಡ್ ಎಷ್ಟಿದೆ ಅಂತಾ ಕೇಳಿ. ಇನ್ವೆಸ್ಟ್ ಮಾಡಿರುವವರ ದುಡ್ಡಿದ್ಯಾ ಅಂತಾ ನೋಡಿದಾಗ ಆಕೆಯ ಬಂಡವಾಳ ಎಲ್ಲವೂ ಹೊರಗೆ ಬರುತ್ತದೆ ಎಂದಿದ್ದಾಳೆ. 

ಇದನ್ನೂ ಓದಿ:ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನ: ವಿದೇಶಿ ನಾಯಕರ ಸಂತಾಪ

ಇನ್ನೂ ಪೊಲೀಸರ ನೋಟಿಸ್ ಬೆನ್ನಲ್ಲೇ ಚಂದ್ರಲೇಲೇಔಟ್ ಪೊಲೀಸ್ ಠಾಣೆಗೆ ಐಶ್ವರ್ಯ ಹಾಗೂ ಪತಿ ಹರೀಶ್ ವಿಚಾರಣೆ ಹಾಜರಾಗಿದ್ರು.‌ ಈ ವೇಳೆ ಕೆಲ ಪ್ರಶ್ನೆಗಳನ್ನು ಕೇಳಿದ ಪೊಲೀಸರು ಐಶ್ವರ್ಯಗೌಡ ಮತ್ತಾಕೆಯ ಪತಿ ಹರೀಶನನ್ನು ಬಂಧಿಸಿದ್ದಾರೆ. ನಂತರ ಮೆಡಿಕಲ್ ಟೆಸ್ಟ್ ಮಾಡಿಸಿ ಕೋರಮಂಗಲದ ಜಡ್ಜ್ ಮನೆಗೆ ಕರೆದೊಯ್ದು ಹಾಜರುಪಡಿಸಿದ್ರು. ಜಡ್ಜ್ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದು, ಸೋಮವಾರ ಮತ್ತೆ ಬಾಡಿ ವಾರೆಂಟ್ ಮೇಲೆ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ‌.

ಮತ್ತೊಂದು ಕಡೇ ದೂರುದಾರೆ ವನಿತಾ ಕೂಡ ಪೊಲೀಸ್ ಠಾಣೆಗೆ ಆಗಮಿಸಿ ಐಶ್ವರ್ಯ ವಂಚನೆಗೆ ಸಂಬಂಧಪಟ್ಟಂತೆ ಒಂದಷ್ಟು ದಾಖಲೆ ನೀಡಿದ್ದಾರೆ. ಈ ವೇಳೆ ಐಶ್ವರ್ಯ ಫೋಟೋ ರಿಲೀಸ್ ಮಾಡಿರೋ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ್ದು,ಇದೆಲ್ಲ ಕೇಸ್ ಡೈವರ್ಟ್ ಮಾಡುವ ಹುನ್ನಾರ ಎಂದು ತಿರುಗೇಟು ನೀಡಿದ್ದಾರೆ‌.

ಇದನ್ನೂ ಓದಿ:ಹೊಸ ವರ್ಷಕ್ಕೆ ಗುಡ್‌ ನ್ಯೂಸ್:‌ ಡಿಸೆಂಬರ್‌ 31ರ ತಡರಾತ್ರಿ 2.45ರವರೆಗೂ ಮೆಟ್ರೋ ಸೇವೆ

ವನಿತಾ ಹಾಗೂ ಐಶ್ವರ್ಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಡಿಕೆ ಸುರೇಶ್ ಹೆಸರು ಕೂಡ ತಳಕು ಹಾಕಿಕೊಂಡಿತ್ತು. ಡಿಕೆ ಸುರೇಶ್ ಧ್ವನಿಯಲ್ಲಿ ಮಾತನಾಡಿದ್ದ ನಟ ಧರ್ಮ ವನತಾಳಿಂದ ಹಣ ಕೊಡಲು ಕಾಲಾವಕಾಶ ಕೇಳಿದ್ದ. ಅದು ಡಿ.ಕೆ.ಸುರೇಶ್ ಅಂತಲೇ ವನಿತಾ ನಂಬಿದ್ದಳು. ಸದ್ಯ ಈ ಬಗ್ಗೆ ಡಿಕೆ ಸುರೇಶ್ ಕೂಡಾ ಪ್ರತಿಕ್ರಿಯೆ ನೀಡಿದ್ದು, ಯಾರೇ ನನ್ನ ಹೆಸರು ಬಳಸಿಕೊಂಡರೂ ಅದು ಅಪರಾಧವಾಗುತ್ತೆ. ಪೊಲೀಸರು ವಿಚಾರಣೆ ಮಾಡಿ‌ ತಿಳಿಸಲಿ. ನಾನು ಪೊಲೀಸ್ ಆಯುಕ್ತರಿಗೂ‌ ದೂರು ನೀಡುತ್ತೇನೆ ಎಂದಿದ್ದಾರೆ. 

ಸದ್ಯ ಚಿನ್ನ ಪಡೆದು ವಂಚಿಸಿರೊ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ಮುಂದಕ್ಕೆ ಕೇಸ್ ಯಾವೆಲ್ಲ ಸ್ವರೂಪ ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News