ರಾಜ್ಯಸಭೆಯಲ್ಲಿ ಕಾವೇರಿ ನೀರಿನ ವಿಚಾರ ಪ್ರಸ್ತಾಪಿಸಿದ ದೇವೇಗೌಡರು

ರಾಜ್ಯಸಭೆಯಲ್ಲಿ  ಇಂದು, ಬೆಳೆಯುತ್ತಿರುವ ಬೆಂಗಳೂರಿನ  ಕುಡಿಯುವ ನೀರಿನ ಗಂಭೀರ ಸಮಸ್ಯೆಗೆ ಪರಿಹಾರ ಹಾಗೂ ಕಾವೇರಿ ನದಿ ವಿವಾದ ಬಗೆಹರಿಸುವಂತೆ  ಕೇಂದ್ರದ ಸರ್ಕಾರಕ್ಕೆ, ಕರ್ನಾಟಕದ ನೀರಾವರಿ ವಿಚಾರಗಳಲ್ಲಿ ಬದ್ಧತೆಯುಳ್ಳ ಮತ್ತು ಕಳಕಳಿ ಹೊಂದಿರುವ ರಾಜಕಾರಣಿ  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹಕ್ಕೊತ್ತಾಯ ಮಾಡಿದರು. 

Written by - Zee Kannada News Desk | Last Updated : Feb 6, 2025, 10:20 PM IST
  • ಕರ್ನಾಟಕದ ನೀರಾವರಿ ವಿಚಾರಗಳಲ್ಲಿ ಬದ್ಧತೆಯುಳ್ಳ ಮತ್ತು ಕಳಕಳಿ ಹೊಂದಿರುವ ರಾಜಕಾರಣಿ
  • ಕಾವೇರಿ ನದಿ ಪ್ರಾಧಿಕಾರ ತಿಂಗಳಿಗೊಮ್ಮೆ, ವಾರಕ್ಕೊಮ್ಮೆ, ದಿನಕೊಮ್ಮೆ ತಮಿಳುನಾಡಿಗೆ ನೀರು ಬಿಡುವಂತೆ ಮಧ್ಯಂತರ ಆದೇಶಗಳನ್ನು ನೀಡುತ್ತಿದೆ.
  • ಬೆಂಗಳೂರಿನ ಜನರಿಗೆ ನೀರೇ ಇಲ್ಲದಿರುವಾಗ ನಾವು ಹೇಗೆ ತಾನೆ ಬಿಡಲು ಸಾಧ್ಯ? ಎಂದು ತಮ್ಮ ಆಕ್ರೋಶವನ್ನು ಸದನದಲ್ಲಿ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ಕಾವೇರಿ ನೀರಿನ ವಿಚಾರ ಪ್ರಸ್ತಾಪಿಸಿದ ದೇವೇಗೌಡರು title=

ರಾಜ್ಯಸಭೆಯಲ್ಲಿ  ಇಂದು, ಬೆಳೆಯುತ್ತಿರುವ ಬೆಂಗಳೂರಿನ  ಕುಡಿಯುವ ನೀರಿನ ಗಂಭೀರ ಸಮಸ್ಯೆಗೆ ಪರಿಹಾರ ಹಾಗೂ ಕಾವೇರಿ ನದಿ ವಿವಾದ ಬಗೆಹರಿಸುವಂತೆ  ಕೇಂದ್ರದ ಸರ್ಕಾರಕ್ಕೆ, ಕರ್ನಾಟಕದ ನೀರಾವರಿ ವಿಚಾರಗಳಲ್ಲಿ ಬದ್ಧತೆಯುಳ್ಳ ಮತ್ತು ಕಳಕಳಿ ಹೊಂದಿರುವ ರಾಜಕಾರಣಿ  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಹಕ್ಕೊತ್ತಾಯ ಮಾಡಿದರು. 

ಕಾವೇರಿ ನದಿ ನೀರು ವಿಚಾರದಲ್ಲಿ ಇಡೀ ದೇಶದಲಷ್ಟೇ ಅಲ್ಲ, ವಿಶ್ವದಲ್ಲೇ ಯಾವುದೇ ಮಧ್ಯಂತರ ಆದೇಶಗಳು ಇಷ್ಟು ಬಂದಿಲ್ಲ.  ಕಾವೇರಿ ನದಿ ಪ್ರಾಧಿಕಾರ ತಿಂಗಳಿಗೊಮ್ಮೆ, ವಾರಕ್ಕೊಮ್ಮೆ, ದಿನಕೊಮ್ಮೆ ತಮಿಳುನಾಡಿಗೆ ನೀರು ಬಿಡುವಂತೆ ಮಧ್ಯಂತರ ಆದೇಶಗಳನ್ನು ನೀಡುತ್ತಿದೆ. ಬೆಂಗಳೂರಿನ ಜನರಿಗೆ ನೀರೇ ಇಲ್ಲದಿರುವಾಗ ನಾವು ಹೇಗೆ ತಾನೆ ಬಿಡಲು ಸಾಧ್ಯ? ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ಕಾವೇರಿ, ಮಹದಾಯಿ, ಕೃಷ್ಣ ನದಿ ನೀರು ವಿಚಾರದಲ್ಲಿ ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಬಲಿಸುತ್ತಿಲ್ಲ. ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹಲವು ಸಲ ಬೇಡಿಕೊಂಡರು ಕಾವೇರಿ ನದಿ ವಿವಾದ ಬಗೆಹರಿಸಲು ನನ್ನಿಂದ ಸಾಧ್ಯವಿಲ್ಲ ಎಂದು ಕೈ ತೊಳೆದುಕೊಂಡರು.

ಈಗ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಮಾತ್ರವೇ ಕಾವೇರಿ ನದಿ ವಿವಾದ ಪರಿಹರಿಸಲು ಸಾಧ್ಯ. ಅವರು ಮಧ್ಯಪ್ರವೇಶಿಸಬೇಕು ಎಂದು ದೇವೇಗೌಡರು ಆಗ್ರಹಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News