₹5,00,000 ಠೇವಣಿ ಇರಿಸಿ ₹5,00,000 ಸ್ಥಿರ ಬಡ್ಡಿ ಪಡೆಯಿರಿ; ಈ ಸರ್ಕಾರಿ ಯೋಜನೆಯ ಬಗ್ಗೆ ತಿಳಿಯಿರಿ

Post Office Savings Schemes: ಪ್ರಸ್ತುತ ಈ ಯೋಜನೆಡಿ ಶೇ.7.5ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ Lumpsum ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿ ನೀವು ಕನಿಷ್ಠ 1000 ರೂ.ಗಳನ್ನು ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲದಿದ್ದರೂ, ನೀವು ಬಯಸಿದಷ್ಟು ಹಣವನ್ನು ಇದರಲ್ಲಿ ಹೂಡಿಕೆ ಮಾಡಬಹುದು.

Written by - Puttaraj K Alur | Last Updated : Feb 17, 2025, 05:18 PM IST
  • ಉತ್ತಮ ಬಡ್ಡಿ ನೀಡುವ ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ (KVP) ಯೋಜನೆ
  • ಕಿಸಾನ್ ವಿಕಾಸ್ ಪತ್ರ ಉಳಿತಾಯ ಯೋಜನೆಯಡಿ Lumpsum ಹೂಡಿಕೆ ಮಾಡಲಾಗುತ್ತದೆ
  • ಇದರಲ್ಲಿ ಕನಿಷ್ಠ 1000 ರೂ.ಗಳನ್ನು ಹೂಡಿಕೆ ಮಾಡಬಹುದು, ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ
₹5,00,000 ಠೇವಣಿ ಇರಿಸಿ ₹5,00,000 ಸ್ಥಿರ ಬಡ್ಡಿ ಪಡೆಯಿರಿ; ಈ ಸರ್ಕಾರಿ ಯೋಜನೆಯ ಬಗ್ಗೆ ತಿಳಿಯಿರಿ title=
ಅಂಚೆ ಕಚೇರಿ ಉಳಿತಾಯ ಯೋಜನೆ

Post Office Savings Schemes: ದೇಶದ ಮುಖ್ಯವಾಹಿನಿಯ ಬ್ಯಾಂಕುಗಳು ಉಳಿತಾಯ ಖಾತೆಗಳ ಜೊತೆಗೆ ತಮ್ಮ ಗ್ರಾಹಕರಿಗೆ ಅನೇಕ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತವೆ. ಇವುಗಳಲ್ಲಿ ಹಲವು ರೀತಿಯ ಉಳಿತಾಯ ಯೋಜನೆಗಳು ಸೇರಿವೆ, ಇವುಗಳಲ್ಲಿ ಹೂಡಿಕೆ ಮಾಡುವುದರಿಂದ ನೀವು ಬಹಳಷ್ಟು ಹಣ ಗಳಿಸಬಹುದು. ಆದರೆ ಗ್ರಾಹಕರನ್ನು ಆಕರ್ಷಿಸುವಲ್ಲಿ ಅಂಚೆ ಕಚೇರಿಯು ಬ್ಯಾಂಕುಗಳಿಗಿಂತ ಹಿಂದೆ ಬಿದ್ದಿಲ್ಲ. ಇಷ್ಟೇ ಅಲ್ಲ, ಅಂಚೆ ಕಚೇರಿಯ ಹಲವು ಯೋಜನೆಗಳಲ್ಲಿ ಬ್ಯಾಂಕುಗಳಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ. ಅದ್ಭುತ ಆದಾಯವನ್ನು ಪಡೆಯುವ ಅಂಚೆ ಕಚೇರಿಯ ಒಂದು ಯೋಜನೆಯ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

ಸರ್ಕಾರಿ ಯೋಜನೆಗೆ ಶೇ.7.5ರಷ್ಟು ಬಡ್ಡಿ ಸಿಗುತ್ತಿದೆ

ಅಂಚೆ ಕಚೇರಿಯ ಈ ಯೋಜನೆಯ ಹೆಸರು ಕಿಸಾನ್ ವಿಕಾಸ್ ಪತ್ರ (KVP). ಪ್ರಸ್ತುತ ಈ ಯೋಜನೆಯಡಿ ಶೇ.7.5ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ Lumpsum ಹೂಡಿಕೆ ಮಾಡಲಾಗುತ್ತದೆ. ಇದರಲ್ಲಿ ನೀವು ಕನಿಷ್ಠ 1000 ರೂ.ಗಳನ್ನು ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲದಿದ್ದರೂ, ನೀವು ಅದರಲ್ಲಿ ಎಷ್ಟು ಬೇಕಾದರೂ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯ ಅತ್ಯಂತ ವಿಶೇಷವಾದ ವಿಷಯವೆಂದರೆ, ನೀವು ಎಷ್ಟೇ ಹಣವನ್ನು ಹೂಡಿಕೆ ಮಾಡಿದರೂ, ನಿಮ್ಮ ಹಣವು ಮುಕ್ತಾಯದ ಸಮಯದಲ್ಲಿ ದ್ವಿಗುಣಗೊಳ್ಳುತ್ತದೆ.

ಇದನ್ನೂ ಓದಿದೊಡ್ಡ ಶೋ ರೂಂನಲ್ಲಿ ಅಥವಾ ಸಣ್ಣ ಅಂಗಡಿಯಲ್ಲಿ.. ಚಿನ್ನವನ್ನು ಎಲ್ಲಿ ಖರೀದಿಸಬೇಕು? ಯಾವುದು ಉತ್ತಮ?

ಅವಧಿ ಮುಗಿದ ನಂತರ ಹಣ ದ್ವಿಗುಣ!

ಕಿಸಾನ್ ವಿಕಾಸ್ ಪತ್ರ ಯೋಜನೆಯಡಿ, ನಿಮ್ಮ ಹಣವು 115 ತಿಂಗಳಲ್ಲಿ ಅಂದರೆ 9 ವರ್ಷ 7 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. ಈ ಯೋಜನೆಯಲ್ಲಿ ನೀವು 5 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರೆ, ನಿಮಗೆ 5 ಲಕ್ಷ ರೂಪಾಯಿ ಬಡ್ಡಿ ಸಿಗುತ್ತದೆ. ಅಂದರೆ ಅವಧಿ ಮುಗಿದ ನಂತರ ಒಟ್ಟು 10 ಲಕ್ಷ ರೂಪಾಯಿ ನಿಮಗೆ ಸಿಗುತ್ತದೆ. ಅದೇ ರೀತಿ ನೀವು ಈ ಯೋಜನೆಯಲ್ಲಿ 10 ಲಕ್ಷ ರೂ. ಠೇವಣಿ ಇಟ್ಟಿದ್ದರೆ, ನಿಮಗೆ ನೇರವಾಗಿ 10 ಲಕ್ಷ ರೂ. ಬಡ್ಡಿ ಸಿಗುತ್ತದೆ ಮತ್ತು ಮುಕ್ತಾಯದ ನಂತರ ಒಟ್ಟು 20 ಲಕ್ಷ ರೂ. ಸಿಗುತ್ತದೆ. 

ಹೂಡಿಕೆದಾರರ ಹಣ ಸಂಪೂರ್ಣ ಸುರಕ್ಷಿತ

ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಯೋಜನೆ ಸಂಪೂರ್ಣವಾಗಿ ಸುರಕ್ಷಿತ ಯೋಜನೆಯಾಗಿದೆ. ಇದರಲ್ಲಿ ಠೇವಣಿ ಇಡುವ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ನಿಮಗೆ ಗ್ಯಾರಂಟಿಯೊಂದಿಗೆ ಸ್ಥಿರ ಬಡ್ಡಿ ಸಿಗುತ್ತದೆ. ಇದು ಅಂಚೆ ಕಚೇರಿಯ ಉತ್ತಮ ಯೋಜನೆಯಾಗಿದೆ. ಅಂಚೆ ಕಚೇರಿಯು ಕೇಂದ್ರ ಸರ್ಕಾರದಡಿ ಕಾರ್ಯನಿರ್ವಹಿಸುತ್ತಿದ್ದು, ಹಲವಾರು ಸೇವೆಗಳನ್ನು ಒದಗಿಸುತ್ತದೆ. ಆದ್ದರಿಂದ ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದ ಎಲ್ಲಾ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ: ಒಂದೇ ದಿನದಲ್ಲಿ ಪಾತಾಳಕ್ಕಿಳಿದ ಚಿನ್ನದ ದರ ! ಭಾರೀ ಇಳಿಕೆ ಕಂಡ ಬಂಗಾರ- ಬೆಳ್ಳಿ! ಆಭರಣ ಖರೀದಿಸಲು ಬೆಸ್ಟ್ ಟೈಮ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News