Actor Mohan Shankar Family: ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಪ್ರಮುಖ ನಟ ಹಾಗೂ ನಿರ್ದೇಶಕ ಮೋಹನ್ ಶಂಕರ್ ಯಾರಿಗೆ ಸಾಲುತ್ತೆ ಸಂಬಳ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.. ಸದ್ಯ ಕಿರುತೆರೆಯ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ನಟನ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಇದೀಗ ತಿಳಿದುಕೊಳ್ಳೋಣ..
ಕನ್ನಡ ಚಿತ್ರರಂಗದ ಅದ್ಭುತ ಕಲಾವಿದರ ಪೈಕಿ ನಟ ಮೋಹನ್ ಶಂಕರ್ ಕೂಡ ಒಬ್ಬರು.. ಇವರು ಸಾಕಷ್ಟು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ..
ಕೃಷ್ಣ ನೀ ಲೇಟಾಗಿ ಬಾರೋ ಸಿನಿಮಾದ ಮೂಲಕ ನಿರ್ದೇಶನಕ್ಕಿಳಿದ ನಟ ಮೋಹನ್ ಶಂಕರ್ ಉತ್ತಮ ಬರಹಗಾರರೂ ಆಗಿದ್ದಾರೆ.. ಶಿವಣ್ಣ ಹಾಗೂ ಉಪೇಂದ್ರ ನಟಿಸಿದ ಲವಕುಶ ಚಿತ್ರಕಥೆಯನ್ನು ಬರೆದದ್ದು ಇವರೇ. .
ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟ ಮೋಹನ್ ಶಂಕರ್ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ಬಾಸ್ ಸೀಸನ್ 4ರಲ್ಲಿ ಭಾಗವಹಿಸಿ ಇನ್ನಷ್ಟು ಖ್ಯಾತಿ ಗಳಿಸಿದ್ದರು..
ವಿಶೇಷವೆಂದರೇ ನಟ ಮೋಹನ್ ಶಂಕರ್ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಮಣ್ಯ ಸಿರೀಯಲ್ನಲ್ಲಿ ನಾಯಕಿಯ ತಂದೆಯಾಗಿ ನಟಿಸುವ ಮೂಲಕ ಧಾರವಾಹಿ ಪ್ರಿಯರ ಗಮನ ಸೆಳೆಯುತ್ತಿದ್ದಾರೆ..
ವಿಶೇಷವೆಂದರೇ ನಟ ಮೋಹನ್ ಶಂಕರ್ ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಶ್ರಾವಣಿ ಸುಬ್ರಮಣ್ಯ ಸಿರೀಯಲ್ನಲ್ಲಿ ನಾಯಕಿಯ ತಂದೆಯಾಗಿ ನಟಿಸುವ ಮೂಲಕ ಧಾರವಾಹಿ ಪ್ರಿಯರ ಗಮನ ಸೆಳೆಯುತ್ತಿದ್ದಾರೆ..