ʼಆತನಿಂದ ಜೀವನವೇ ನರಕವಾಯ್ತುʼ- ಗಿಣಿರಾಮ ಧಾರಾವಾಹಿ ಏಕಾಏಕಿ ತೊರೆಯಲು ಆತನೇ ಕಾರಣ ಎಂದ ನಟಿ ನಯನಾ ನಾಗರಾಜ್‌

Nayana Nagaraj reason for leaving the Ginirama serial: ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್​ಗೆ ಸಂದರ್ಶನ ನೀಡಿದ್ದ ನಯನಾ ಅವರು, ಶೂಟಿಂಗ್‌ ವೇಳೆ ತನಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

Written by - Bhavishya Shetty | Last Updated : Jan 31, 2025, 08:19 PM IST
    • ನಟಿ ನಯನಾ ನಾಗರಾಜ್ ಅವರು ‘ಗಿಣಿ ರಾಮ’ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಕಿರುತೆರೆ ಲೋಕವನ್ನೇ ತೊರೆದುಬಿಟ್ಟರು
    • ಈ ದೃಢ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಸ್ವತಃ ಅವರೇ ವಿವರಿಸಿದ್ದಾರೆ
    • ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್​ಗೆ ಸಂದರ್ಶನ ನೀಡಿದ್ದ ನಯನಾ
ʼಆತನಿಂದ ಜೀವನವೇ ನರಕವಾಯ್ತುʼ- ಗಿಣಿರಾಮ ಧಾರಾವಾಹಿ ಏಕಾಏಕಿ ತೊರೆಯಲು ಆತನೇ ಕಾರಣ ಎಂದ ನಟಿ ನಯನಾ ನಾಗರಾಜ್‌ title=
Nayana Nagaraj reason for leaving the Ginirama serial

Nayana Nagaraj reason for leaving the Ginirama serial: ನಟಿ ನಯನಾ ನಾಗರಾಜ್ ಅವರು ‘ಗಿಣಿ ರಾಮ’ ಧಾರಾವಾಹಿಯಲ್ಲಿ ನಟಿಸಿದ ಬಳಿಕ ಕಿರುತೆರೆ ಲೋಕವನ್ನೇ ತೊರೆದುಬಿಟ್ಟರು. ಆದರೆ ಈ ದೃಢ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಸ್ವತಃ ಅವರೇ ವಿವರಿಸಿದ್ದಾರೆ.

‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್​ಗೆ ಸಂದರ್ಶನ ನೀಡಿದ್ದ ನಯನಾ ಅವರು, ಶೂಟಿಂಗ್‌ ವೇಳೆ ತನಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ದುಬೈಗಿಂತಲೂ ಅಗ್ಗದ ಬೆಲೆಯಲ್ಲಿ ಚಿನ್ನ ಸಿಗುವುದು ಇಲ್ಲಿ!ಬಂಗಾರದ ಮೇಲೆ ಒಂದೇ ಒಂದು ರೂ. ಟ್ಯಾಕ್ಸ್ ನೀಡಬೇಕಿಲ್ಲ, ಅಲ್ಲಿಗೆ ತೆರಳಲು ವೀಸಾದ ಅಗತ್ಯವೂ ಇಲ್ಲ

"ನನಗೆ ಇಷ್ಟ ಆಗಿಲ್ಲಾ ಅಂದ್ರೆ ನೇರವಾಗೇ ಹೇಳುತ್ತೇನೆ. ನೀವು ಏನಾದರೂ ಕೆಟ್ಟದ್ದು ಹೇಳಿದರೆ ನನಗೆ ಬೇಸರ ಆಗುತ್ತದೆ. ನನ್ನ ಪಾಡಿಗೆ ನಾನು ಇರುತ್ತಾ ಇದ್ದೆ. ಆದರೆ ಒಂದೂವರೆ ವರ್ಷದ ಬಳಿಕ ಸೆಟ್​ನಲ್ಲಿ ಕಿರಿಕ್ ಆಗಿತ್ತು. ಆ ಕಿರಿಕಿರಿಯನ್ನು ಸುಮಾರು ಒಂದೂಕಾಲು ವರ್ಷ ತಡೆದುಕೊಂಡೆ" ಎಂದು ಬೇಸರ ಹೊರಹಾಕಿದ್ದಾರೆ.

"ಅಲ್ಲಿ ನನ್ನ ತಪ್ಪಿರಲಿಲ್ಲ. ಆದರೆ, ಆ ವ್ಯಕ್ತಿ ನನ್ನ ಮೇಲೆ ದ್ವೇಷ ಸಾಧಿಸಲು ಪ್ರಾರಂಭಿಸಿದರು. ಎಲ್ಲರೂ ತುಂಬಾನೇ ಖುಷಿಯಿಂದ ಬಂದು ಮಾತನಾಡುತ್ತಿದ್ದರು. ಆದರೆ, ಆ ವ್ಯಕ್ತಿ ಎಲ್ಲವನ್ನೂ ಕಂಟ್ರೋಲ್‌ ಮಾಡಲು ಮುಂದಾದ. ಯಾರಾದರೂ ಬಂದು ನನ್ನ ಜೊತೆ ಮಾತನಾಡಿದ್ರೆ, ಏನೋ ಲಲ್ಲೆ ಹೊಡಿತೀಯಾ ಎನ್ನುತ್ತಿದ್ದರು. ಬರುಬರುತ್ತಾ ನಾನು ಕುಗ್ಗಿ ಹೋದೆ. ಆ್ಯಕ್ಷನ್ ಎನ್ನುವಾಗಲೂ ಕೆಟ್ಟ ಕಮೆಂಟ್ ಮಾಡುತ್ತಿದ್ದರು. ಆಮೇಲೆ ಹಾಗಂದಿದ್ದು ನಿನಗಲ್ಲ ಎನ್ನುತ್ತಿದ್ದರು. ವಾಹಿನಿಯವರಿಗೆ ಹೇಳಿದರೂ ಸಹ ಹೆಚ್ಚೇನು ಬದಲಾವಣೆ ಆಗಿರಲಿಲ್ಲ" ಎಂದು ನಯನಾ ಹೇಳಿದ್ದಾರೆ.

ಇಂಡಸ್ಟ್ರಿಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ವ್ಯಕ್ತಿಯೊಬ್ಬರು ‘ಗಿಣಿ ರಾಮ’ ಧಾರಾವಾಹಿ ಸೆಟ್​ನಲ್ಲಿ ನಯನಾ ಜೊತೆ ತೀವ್ರ ಕಠಿಣವಾಗಿ ವರ್ತಿಸಿದ್ದಾರಂತೆ. ಇದಕ್ಕೆ ಅದೇ ಟೋನ್‌ನಲ್ಲಿ ಉತ್ತರ ಕೊಟ್ಟಿದ್ದರಂತೆ ನಯನಾ. ಆದರೆ ಈ ಘಟನೆ ಆ ವ್ಯಕ್ತಿಯ ಅಹಂಗೆ ಪೆಟ್ಟು ಕೊಟ್ಟಿತ್ತು. ಅಂದಿನಿಂದ ನಯನಾ ಅವರ ಜೀವನವೇ ನರಕವಾಗಿ ಹೋಗಿತ್ತು.

ಇದನ್ನೂ ಓದಿ: ಈ ಸ್ಟಾರ್‌ ನಟಿಗೆ 'ಕ್ಲೀನಾಗಿ ಮುಖ ತೊಳ್ಕೊಂಡು ಬನ್ನಿ' ಅಂದಿದ್ರಂತೆ ಕಮಲ್ ಹಾಸನ್ !!

"ಆ ಘಟನೆಯಿಂದ ನಾನು ದಿನಾ ಅಳುತ್ತಿದ್ದೆ. ನಾನು ಇಷ್ಟಪಟ್ಟು ಬಂದ ಫೀಲ್ಡ್‌ ಇದಾಗಿತ್ತು. ಸೆಟ್​ನಲ್ಲಿ ಆದ ಫ್ರಸ್ಟ್ರೇಷನ್​ನ ನನ್ನ ಆಪ್ತರ ಮೇಲೆ ಹಾಕುತ್ತಿದ್ದೆ. ಕೊನೆಗೆ ಧಾರಾವಾಹಿ ಬಿಡುವ ನಿರ್ಧಾರ ತೆಗೆದುಕೊಂಡೆ. ನೀನು ಬಿಟ್ಟರೆ ಧಾರಾವಾಹಿ ಮುಗಿಯುತ್ತದೆ ಎಂದರು. ತೊಂದರೆ ಇಲ್ಲ ಎಂದು ಧಾರಾವಾಹಿ ಬಿಟ್ಟೆ. ಆ ನಂತರ ಧಾರಾವಾಹಿ ಕೂಡ ಮುಗಿಯಿತು" ಎಂದು ಬೇಸರ ಹೊರಹಾಕಿದ್ದಾರೆ ನಯನಾ.

 

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News