ರೌಡಿ ಹೈದರ್ ಅಲಿ ಹಂತಕರ ಬಂಧನ : ಹಳೆ ವೈಷಮ್ಯಕ್ಕೆ ಸ್ಕೇಚ್ ಹಾಕಿ ಹತ್ಯೆ ಮಾಡಿದ್ದ ಗ್ಯಾಂಗ್

ಬಂಧಿತ ನಯಾಜ್ ಪಾಷಾ ಹಾಗೂ ಕೊಲೆಯಾಗಿರುವ ಹೈದರ್ ಅಲಿ ನಡುವೆ ಹತ್ತು ವರ್ಷಗಳಿಂದ ವೈಷಮ್ಯ ಇತ್ತು. ಹೈದರ್ ನಯಾಜ್ ನನ್ನ ಕೊಲೆ ಮಾಡಲು ಆಗಾಗ ಅಟ್ಯಾಕ್ ಮಾಡ್ತ ಇದ್ದ. ಅದೇ ರೀತಿ ನಯಾಜ್ ಕೂಡ ಹೈದರ್ ನನ್ನ ಕೊಲೆ ಮಾಡಲು ಹೊಂಚು ಹಾಕುತ್ತಿದ್ದ.

Written by - VISHWANATH HARIHARA | Edited by - Ranjitha R K | Last Updated : Feb 27, 2025, 04:25 PM IST
ರೌಡಿ ಹೈದರ್ ಅಲಿ ಹಂತಕರ ಬಂಧನ : ಹಳೆ ವೈಷಮ್ಯಕ್ಕೆ ಸ್ಕೇಚ್ ಹಾಕಿ ಹತ್ಯೆ ಮಾಡಿದ್ದ ಗ್ಯಾಂಗ್ title=

ಬೆಂಗಳೂರು : ರೌಡಿಶೀಟರ್ ಹೈದರ್ ಅಲಿ ಮರ್ಡರ್ ಮಾಡಿದ್ದ ಗ್ಯಾಂಗ್ ಅರೆಸ್ಟ್ ಆಗಿದೆ. ಆರೋಪಿಗಳನ್ನು ವಿಚಾರಣೆ ಮಾಡಿದಾಗ ಹತ್ಯೆಯ ಹಿಂದಿನ ಕಾರಣ ತಿಳಿದು ಬಂದಿದೆ.

ರೌಡಿಶೀಟರ್, ಕಾಂಗ್ರೆಸ್ ಶಾಸಕ ಹ್ಯಾರಿಸ್ ಆಪ್ತ ಹೈದರ್ ಅಲಿಯನ್ನ ಹತ್ಯೆ ಮಾಡಿದ್ದ ಏಳು ಮಂದಿ ಹಂತಕರನ್ನ ಬಂಧನ ಮಾಡಲಾಗಿದೆ. ಬಂಧಿತ ಏಳು ಮಂದಿ ಹಂತಕರಲ್ಲಿ ಶಿವಮೊಗ್ಗ ಜಿಲ್ಲೆಯ ಮೂವರು ಹಾಗೂ ಬೆಂಗಳೂರಿನವರು ನಾಲ್ಕು ಮಂದಿ ಇದ್ದಾರೆ. ಬಂಧಿತ ನಯಾಜ್ ಪಾಷಾ ಹಾಗೂ ಕೊಲೆಯಾಗಿರುವ ಹೈದರ್ ಅಲಿ ನಡುವೆ ಹತ್ತು ವರ್ಷಗಳಿಂದ ವೈಷಮ್ಯ ಇತ್ತು. ಹೈದರ್ ನಯಾಜ್ ನನ್ನ ಕೊಲೆ ಮಾಡಲು ಆಗಾಗ ಅಟ್ಯಾಕ್ ಮಾಡ್ತ ಇದ್ದ. ಅದೇ ರೀತಿ ನಯಾಜ್ ಕೂಡ ಹೈದರ್ ನನ್ನ ಕೊಲೆ ಮಾಡಲು ಹೊಂಚು ಹಾಕುತ್ತಿದ್ದ.ಇಬ್ಬರ ಮೇಲೆ ಎರಡು ಗ್ಯಾಂಗ್ ನಿಂದ ಆಗಾಗ ಕೊಲೆಗಾಗಿ ಅಟ್ಯಾಕ್ ಕೂಡ ಆಗಿದ್ದ ವಿಚಾರ ಪೊಲೀಸರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಕುಡಿಯಲು ಹಣ ಕೊಡದಿದ್ದಕ್ಕೆ ಮಹಿಳೆಗೆ ಚಾಕು ಇರಿತ : ತುಂಡಾದ ಎಡ ಕಿವಿ.. ಗದ್ದದವರೆಗೆ ಗಾಯ

ನಾಲ್ಕು ದಿನಗಳ ಹಿಂದೆ ಅಶೋಕ್ ನಗರದ ಪುಟ್ಬಾಲ್ ಸ್ಟೇಡಿಯಂ ಮುಂಭಾಗ ಅಶೋಕ್ ನಗರ ರೌಡಿಶೀಟರ್ ಹೈದರ್ ಅಲಿಯನ್ನ ಬೈಕ್ ನಲ್ಲಿ ಹೋಗುವಾಗ ಹಂತಕರು ಅಡ್ಡ ಹಾಕಿ ಭೀಕರವಾಗಿ ಹತ್ಯೆ ಮಾಡಿ  ತಲೆಮರಿಸಿಕೊಂಡಿದ್ದರು. ಹಂತಕರ ಬಂಧನಕ್ಕಾಗಿ ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.ಕೊಲೆ ನಡೆದು ನಾಲ್ಕು ದಿನದ ಬಳಿಕ ಪ್ರಕರಣದಲ್ಲಿ ಏಳು ಬಂಧನ ಮಾಡಿದ್ದಾರೆ.ನಾಯಾಜ್   ಪಾಷಾ@ ನಾಜು, ರಿಜ್ವಾನ್, ಮತೀನ್, ಸದ್ದಾಂ, ದರ್ಶನ್, ರಹೀದ್, ವಾಸೀಂ, ಬಂಧಿತ ಆರೋಪಿಗಳಾಗಿದ್ದಾರೆ. ರಿಜ್ವಾನ್ , ಮತೀನ್, ಸದ್ದಾಂ ಶಿವಮೊಗ್ಗದವರಾಗಿದ್ದು ಮೂವರ ಮೇಲು ಶಿವಮೊಗ್ಗದ ವಿವಿಧ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ.

ಪ್ರಕರಣದ ಪ್ರಮುಖ ಆರೋಪಿ ನಯಾಜ್ ಪಾಷಾ @ ನಾಜ್ ಕೂಡ ಅಶೋಕ ನಗರ ಪೊಲೀಸ್ ಠಾಣಾ ರೌಡಿಶೀಟರ್ ಆಗಿದ್ದಾನೆ. ಹಿಂದೂ ಮುಸ್ಲಿಂ ಗಲಾಟೆ ಕೇಸ್ ಸೇರಿದ ಎಂಟು ಕೇಸ್ ಗಳು ಈತನ ಮೇಲಿವೆ. ನಾಜ್ ಕೊಲೆ ಮಾಡಲು ಹೈದರ್ ಪ್ಲಾನ್ ಮಾಡಿಕೊಂಡಿದ್ದ. ಈ ವಿಷಯ ತಿಳಿದು ಹೈದರ್ ಕೊಲೆಗೆ ಪ್ಲಾನ್ ಮಾಡಿದ್ದ ಆರೋಪಿ ನಾಜ್ ಪ್ಲಾನ್ ಮಾಡಿದ್ದ. ಇದಕ್ಕಾಗಿ 27ರಂದು ಹೈದರ್ ಎಂಜಿ ರಸ್ತೆಯ ಪಬ್ ನಿಂದ ತಡರಾತ್ರಿ  ಸ್ನೇಹಿತರೊಟ್ಟಿಗೆ ಬೈಕ್ ನಲ್ಲಿ ಹೋಗುವಾಗ ಅಡ್ಡ ಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು.

ಇದನ್ನೂ ಓದಿ : ಪ್ರೇಯಸಿ ಸೇರಿ ತನ್ನ ಕುಟುಂಬದ ಐವರನ್ನ ಬರ್ಬರವಾಗಿ ಕೊಲೆ ಮಾಡಿದ ಯುವಕ; ಕಾರಣವೇನು ಗೊತ್ತಾ..?

ಒಟ್ಟಿನಲ್ಲಿ ಒಂದೇ ಏರಿಯಾದಲ್ಲಿ ವಾಸವಿದ್ದ ಹೈದರ್ ಮತ್ತು ನಾಜ್ ಒಬ್ಬರಿಗೊಬ್ಬರು ಹಾವು ಮುಂಗುಸಿ ತರ ಇದ್ದರು. ಸದ್ಯ ಹೈದರ್ ಕಥೆ ಮುಗಿಸಿರುವ ನಾಜ್ ತನ್ನ ಗ್ಯಾಂಗ್ ನೊಟ್ಟಿಗೆ ಜೈಲು ಸೇರಿದ್ದಾನೆ.ಆದರೆ ಹೈದರ್ ಹುಡುಗರು ಮುಂದಿನ ದಿನಮಾನಗಳಲ್ಲಿ ನಾಜ್ ಗೆ ಒಂದು ಗತಿ ಕಾಣಿಸೋದಕ್ಕೆ ಸ್ಕೇಚ್ ಹಾಕೊಂದತೂ ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News