Shivas Favourite birth Date: ಜ್ಯೋತಿಷ್ಯವು ನಮ್ಮ ಭವಿಷ್ಯದ ಬಗ್ಗೆ ಹೇಳುವಂತೆಯೇ, ಸಂಖ್ಯಾಶಾಸ್ತ್ರವೂ ನಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ನಮ್ಮ ಕುರಿತಾದ ಹಲವು ವಿಚಾರಗಳನ್ನು ತಿಳಿಸಿ ಕೊಡುತ್ತದೆ. ನಾವು ಹೇಗೆ ವರ್ತಿಸುತ್ತೇವೆ ಎಂಬಂತಹ ನಮ್ಮ ವಿಶಿಷ್ಟ ಗುಣಲಕ್ಷಣಗಳ ಬಗ್ಗೆಯೂ ಸಹ ಸಂಖ್ಯಾ ಶಾಸ್ತ್ರ ಹೇಳುತ್ತದೆ.
ಯಾವುದೇ ತಿಂಗಳ 7, 11, 22 ಮತ್ತು 29 ನೇ ತಾರೀಖಿನಂದು ಜನಿಸಿದವರು ದೇವಿರಂದ ಆರ್ಶಿವಾದ ಮಾಡಲ್ಪಟ್ಟಿರುತ್ತಾರೆ. ಅವರು ಏನು ಬಯಸುತ್ತಾರೋ, ದೇವರು ಅದನ್ನು ಪೂರೈಸುತ್ತಾನೆ. ಈ ಜನ್ಮ ದಿನಾಂಕಗಳಲ್ಲಿ ಜನಿಸಿದವರ ಮೇಲೆ ದೇವರ ಕೃಪೆ ಸದಾ ಇರುತ್ತದೆ, ಇವರನ್ನು ರಕ್ಷಣಾ ಕವಚದಂತೆ ಆ ಪರಮಾತ್ಮ ಕಾಯುತ್ತಾನೆ ಎನ್ನುತ್ತದೆ ಸಂಖ್ಯಾ ಶಾಸ್ತ್ರ.
ಈ ದಿನಾಂಕಗಳಲ್ಲಿ ಜನಿಸಿದವರು ದೇವರ ಅನುಗ್ರಹ ಪಡೆದಿರುವ ಕಾರಣ, ಇವರನ್ನು ಅಪಘಾತಗಳು ಅಥವಾ ಅಪಾಯಗಳಿಂದ ರಕ್ಷಿಸುತ್ತಾನೆ. ಅವರಿಗೆ ಅರಿವಿಲ್ಲದೆಯೇ ಅವರೊಳಗೆ ಒಂದು ಆಧ್ಯಾತ್ಮಿಕ ಶಕ್ತಿ ಇರುತ್ತದೆ. ಇದರಿಂದಾಗಿ, ಅವರ ಜೀವನವು ಯಾವಾಗಲೂ ಸಂತೋಷ ಮತ್ತು ಪ್ರಕಾಶಮಾನವಾಗಿರುತ್ತದೆ. ಈ ದಿನಾಂಕಗಳಲ್ಲಿ ಜನಿಸಿದವರಿಗೆ ಹೆಚ್ಚಿನ ಆತ್ಮವಿಶ್ವಾಸ ಇರುತ್ತದೆ. ಜೀವನದಲ್ಲಿ ಎಂತಹ ಕಷ್ಟ ಬಂದರು ಎದುರು ನಿಂತು ಅವುಗಳನ್ನು ನಿಭಾಯಿಸುವ ಶಕ್ತಿ ಈ ಜನರಿಗೆ ಇರುತ್ತದೆ.
ಈ ದಿನಾಂಕಗಳಲ್ಲಿ ಜನಿಸಿದ ಜನರು ಆಳವಾದ ಚಿಂತಕರಾಗಿದ್ದು, ಇವರು ನೈಸರ್ಗಿಕವಾಗಿ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಪಡೆದಿರುತ್ತಾರೆ. ಎಲ್ಲರನ್ನೂ ತುಂಬಾ ನಂಬುತ್ತಾರೆ ಮತ್ತು ಹೆಚ್ಚಾಗಿ ಶಾಂತವಾಗಿರುತ್ತಾರೆ.ಏಕಾಗ್ರತೆಯಿಂದ ಕೆಲಸ ಮಾಡುತ್ತಾರೆ. ಇತರರಿಗೆ ಸಹಾಯ ಮಾಡುವ ಗುಣವೂ ಅವರಲ್ಲಿ ಹೆಚ್ಚು ಗೋಚರಿಸುತ್ತದೆ.
ಈ ವಿಶಿಷ್ಟ ಸಂಖ್ಯೆಗಳೊಂದಿಗೆ ಜನಿಸಿದ ಜನರು ಕೆಲವು ವಿಶೇಷ ಗುಣಲಕ್ಷಣಗಳನ್ನು ಹೊಂದಿರುತ್ತಾರೆ. 7 ನೇ ತಾರೀಖಿನಂದು, ಅವರು ಹೊಸ ವಿಷಯಗಳನ್ನು ಕಲಿಯಲು ಆಸಕ್ತಿ ಹೊಂದಿರುತ್ತಾರೆ. 11 ನೇ ತಾರೀಖಿನಂದು ಜನಿಸಿದವರು ಪ್ರಬಲವಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. 22ನೇ ತಾರೀಖಿನಂದು ಜನಿಸಿದವರು ಸಮತೋಲಿತ, ಚಿಂತನಾಶೀಲ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. 29 ರಂದು ಜನಿಸಿದವರು ಸ್ವಾಭಾವಿಕವಾಗಿಯೇ ಇತರರಿಗೆ ಸಹಾಯ ಮಾಡಲು ಆದ್ಯತೆ ನೀಡುತ್ತಾರೆ.ಈ ದಿನಾಂಕಗಳಲ್ಲಿ ಜನಿಸಿದವರು ಕೆಲವು ವಿಶೇಷ ಶಕ್ತಿಗಳಿಂದ ರಕ್ಷಿಸಲ್ಪಡುತ್ತಾರೆ ಎಂದು ನಂಬಲಾಗಿದೆ. ಅವರು ಆಧ್ಯಾತ್ಮದ ಕಡೆಗೆ ಆಕರ್ಷಿತರಾಗುತ್ತಾರೆ. ಅವರ ನಿರ್ಧಾರಗಳು ಹೆಚ್ಚಾಗಿ ಸರಿಯಾಗಿರುತ್ತವೆ. ಉನ್ನತ ಶಕ್ತಿಗಳು ಸಕಾರಾತ್ಮಕವಾಗಿ ಯೋಚಿಸಲು ಮತ್ತು ಒಳ್ಳೆಯ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ನೀಡುತ್ತವೆ ಎಂದು ಅವರು ನಂಬುತ್ತಾರೆ.
ಅವರು ಜೀವನದಲ್ಲಿ ಯಾವುದೇ ಅಡೆತಡೆಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಶಾಂತಿಯನ್ನು ಬಯಸುವವರು ಒತ್ತಡದಲ್ಲಿಯೂ ತಾಳ್ಮೆಯಿಂದ ವರ್ತಿಸಬಹುದು. ಅವರ ನೈಸರ್ಗಿಕ ಆಧ್ಯಾತ್ಮಿಕ ಶಕ್ತಿ ಅವರನ್ನು ಮುಂದೆ ಕರೆದೊಯ್ಯುತ್ತದೆ. ಅವರ ಸೌಮ್ಯ ನಡವಳಿಕೆಯು ಅವರನ್ನು ಸಮಾಜದಲ್ಲಿ ಜನಪ್ರಿಯಗೊಳಿಸುತ್ತದೆ. ಈ ವಿಶೇಷ ದಿನಾಂಕಗಳಂದು ಜನಿಸಿದ ಜನರು ಅದೃಷ್ಟವಂತರು ಎಂದು ಹೇಳಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.